alex Certify ‘ಹೇರ್ ಕಟ್’ ಮಾಡಿಸಬೇಕೆಂದರೆ ಕೈಯಲ್ಲಿರಬೇಕು ಮೊಬೈಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹೇರ್ ಕಟ್’ ಮಾಡಿಸಬೇಕೆಂದರೆ ಕೈಯಲ್ಲಿರಬೇಕು ಮೊಬೈಲ್…!

ಕರೋನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಇದುವರೆಗೆ ಎಲ್ಲ ವ್ಯಾಪಾರ ವಹಿವಾಟುಗಳು ಬಂದ್ ಆಗಿದ್ದವು. ಇದರ ಪರಿಣಾಮವಾಗಿ ಜನತೆ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದರು.

ಹೀಗಾಗಿ ಮೂರನೇ ಹಂತದ ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆರ್ಥಿಕ ಚಟುವಟಿಕೆಗಳಿಗೆ ಅನುವಾಗುವಂತೆ ಕೆಲವೊಂದು ನಿರ್ಬಂಧಗಳೊಂದಿಗೆ ವಿನಾಯಿತಿ ನೀಡಿದ್ದು, ಈಗ ಅಂಗಡಿ -ಮುಂಗಟ್ಟುಗಳು ಆರಂಭವಾಗಿವೆ. ಇದುವರೆಗೆ ಬಂದ್ ಆಗಿದ್ದ ಕ್ಷೌರದಂಗಡಿಗಳು ಸಹ ಹಸಿರು ವಲಯದಲ್ಲಿ ಕಾರ್ಯಾರಂಭ ಮಾಡಿವೆ.

ಕ್ಷೌರಕ್ಕೆ ಬರುವವರ ಪ್ರತಿಯೊಬ್ಬರ ಮಾಹಿತಿಯನ್ನು ಕ್ಷೌರಿಕರು ದಾಖಲು ಮಾಡಬೇಕಾಗಿದ್ದು, ರಿಜಿಸ್ಟರ್ ಒಂದರಲ್ಲಿ ಗ್ರಾಹಕರ ಮೊಬೈಲ್ ನಂಬರ್ ಸಹಿತ ಹೆಸರು-ವಿಳಾಸ ಮೊದಲಾದವನ್ನು ಬರೆಯಬೇಕಾಗಿದೆ. ಅಲ್ಲದೆ ಗ್ರಾಹಕರ ಬಳಿ ಮೊಬೈಲ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿದ್ದು, ಹೀಗಾಗಿ ಹೇರ್ ಕಟ್ ಮಾಡಿಸಿಕೊಳ್ಳುವವರು ಮೊಬೈಲ್ ತೆಗೆದುಕೊಂಡು ಹೋಗಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...