alex Certify ಸಿಡಿ ಪ್ರಕರಣದಲ್ಲಿ ವಿಚಾರಣೆಗೆಂದು ಹೋದ ಯುವಕ ಕಿಡ್ನಾಪ್; ಪೋಷಕರಿಗೆ ಆಘಾತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಡಿ ಪ್ರಕರಣದಲ್ಲಿ ವಿಚಾರಣೆಗೆಂದು ಹೋದ ಯುವಕ ಕಿಡ್ನಾಪ್; ಪೋಷಕರಿಗೆ ಆಘಾತ

ಬೀದರ್: ಕಾನೂನು ವಿದ್ಯಾರ್ಥಿಯೊಬ್ಬನನ್ನು ಮೂರು ಜನರ ತಂಡ ಕರೆದುಕೊಂಡು ಹೋಗಿದ್ದು, ಎರಡು ದಿನ ಕಳೆದರೂ ಯುವಕ ಬಾರದಿದ್ದಾಗ ಪೋಷಕರು ಶಾಕ್ ಆಗಿದ್ದು, ಕಿಡ್ನಾಪ್ ಪ್ರಕರಣ ದಾಖಲಿಸಿರುವ ಘಟನೆ ಬೀದರ್ ನ ಭಾಲ್ಕಿಯಲ್ಲಿ ನಡೆದಿದೆ.

26 ವರ್ಷದ ಕಾನೂನು ವಿದ್ಯಾರ್ಥಿ ಅಭಿಷೇಕ್ ಅಪಹರಣಕ್ಕೊಳಗಾಗಿರುವ ಯುವಕ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರಣೆಗೆಂದು ಪೊಲೀಸರು ಯುವಕನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಪೋಷಕರು ಸುಮ್ಮನಿದ್ದರು. ಆದರೆ ಯುವಕ ಎರಡು ದಿನಗಳಾದರೂ ಮನೆಗೆ ಬಂದಿಲ್ಲ.

 ರಾಸಲೀಲೆ ಸಿಡಿ ಪ್ರಕರಣ – ತನ್ನ ಆಪ್ತನ ಮೂಲಕ ದೂರು ದಾಖಲಿಸಿದ ಸಾಹುಕಾರ್

ಈಗ ಗಾಬರಿಯಾಗಿರುವ ಪೋಷಕರು ಭಾಲ್ಕಿ ನಗರ ಠಾಣೆಯಲ್ಲಿ ತಮ್ಮ ಮಗ ಕಿಡ್ನಾಪ್ ಆಗಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...