alex Certify ಸಿಡಿಲಿನ ಸದ್ದಿಗೆ ಬೆದರಿ ಕೆರೆಗೆ ಜೀಪ್ ಬಿಟ್ಟ ಚಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಡಿಲಿನ ಸದ್ದಿಗೆ ಬೆದರಿ ಕೆರೆಗೆ ಜೀಪ್ ಬಿಟ್ಟ ಚಾಲಕ

ಶನಿವಾರದಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ಗುಡುಗು – ಸಿಡಿಲಿನ ಸಹಿತ ಮಳೆಯಾಗಿದ್ದು, ಈ ಸಂದರ್ಭದಲ್ಲಿ ಸಿಡಿಲಿನ ಸದ್ದಿಗೆ ಬೆದರಿದ ಚಾಲಕರೊಬ್ಬರು ಕೆರೆಗೆ ಜೀಪ್ ಹರಿಸಿದ ಘಟನೆ ನಡೆದಿದೆ.

ಸಂಜೆ ಈ ಘಟನೆ ನಡೆದಿದ್ದು ರಿಪ್ಪನ್ ಪೇಟೆಯಿಂದ ಹೊಸನಗರ ರಸ್ತೆಯಲ್ಲಿ ಬೊಲೆರೋ ವಾಹನ ಹೋಗುತ್ತಿವಾಗ ಭಾರಿ ಸದ್ದಿನೊಂದಿಗೆ ಗುಡುಗು-ಸಿಡಿಲು ಬಂದಿದೆ. ಇದರಿಂದಾಗಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು ವಾಹನ ಕೆರೆಗೆ ಉರುಳಿದೆ.

ಬೊಲೆರೋದಲ್ಲಿದ್ದ ಇಬ್ಬರು ವ್ಯಕ್ತಿಗಳು ಅಪಾಯದಿಂದ ಪಾರಾಗಿದ್ದು, ಬಳಿಕ ಕ್ರೇನ್ ಮೂಲಕ ವಾಹನವನ್ನು ಹೊರ ತೆಗೆಯಲಾಗಿದೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...