alex Certify ಶೋಕಿ ಜೀವನಕ್ಕಾಗಿ ಸರಗಳ್ಳತನಕ್ಕಿಳಿದ ಮ್ಯಾನೇಜರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೋಕಿ ಜೀವನಕ್ಕಾಗಿ ಸರಗಳ್ಳತನಕ್ಕಿಳಿದ ಮ್ಯಾನೇಜರ್..!

ಆತ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದವನು. ಬರುವ ಸಂಬಳದಲ್ಲಿ ಶೋಕಿ ಜೀವನ ಮಾಡುವುದು ಕಷ್ಟ ಎಂದು ತಿಳಿದ ಈತ ಕೆಲಸ ಬಿಟ್ಟು ಹಿಡಿದ ದಾರಿ ಕಳ್ಳತನ. ಹೀಗೆ ಕಳ್ಳತನ ಮಾಡಿ ಪಬ್, ಬಾರ್, ಜೂಜು ಎಂದು ಕದ್ದ ಹಣ ಖರ್ಚು ಮಾಡುತ್ತಿದ್ದವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು, ಜಯಕುಮಾರ್ ಅಲಿಯಾಸ್ ಜಯ ಗಣಿ. ಈತ ಮೂಲತಃ ತಮಿಳುನಾಡಿನವನು. ಆದರೆ ಬನಶಂಕರಿಯಲ್ಲಿ ವಾಸವಿದ್ದ. ಆಗಷ್ಟ್ 8 ರಂದು ನೆಲಗದರನಹಳ್ಳಿಯಲ್ಲಿ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಸರವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಮಹಿಳೆಯ ದೂರಿನನ್ವಯ ತನಿಖೆ ಪ್ರಾರಂಭಿಸಿದ್ದ ಪೊಲೀಸರ ಬಲೆಗೆ ಜಯಕುಮಾರ್ ಬಿದ್ದಿದ್ದಾನೆ.

ಈತನ ಬಳಿ ಇದ್ದ 60 ಗ್ರಾಂ ಚಿನ್ನಾಭರಣ ಹಾಗೂ 2 ದ್ವಿಚಕ್ರ ವಾಹನಗಳನ್ನು ಪೀಣ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ ಬೇರೆ ಬೇರೆ ಠಾಣೆಗಳಲ್ಲಿ ಒಟ್ಟು 22 ಸರಗಳ್ಳತನ ಕೇಸ್ ದಾಖಲಾಗಿವೆ. ಇನ್ನು ತಮಿಳುನಾಡಿನ ವಿವಿಧ ಪೊಲೀಸ್ ಠಾಣೆಗಳಲ್ಲಿಯೂ ಕೇಸ್ ದಾಖಲಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...