ಕೊರೊನಾ ಸೋಂಕು ಎಲ್ಲಿ ಬೇಕಾದ್ರೂ ಬರಬಹುದು. ಇದಕ್ಕೆ ದಾವಣಗೆರೆ ಉತ್ತಮ ನಿದರ್ಶನ. ಹಸಿರು ವಲಯದಲ್ಲಿ ಕೊರೊನಾ ಸೋಂಕಿಲ್ಲವೆಂಬ ನಿರ್ಲಕ್ಷ್ಯ ದೊಡ್ಟ ಸಮಸ್ಯೆಗೆ ಕಾರಣವಾಗಬಹುದು. ದಾವಣಗೆರೆಯಲ್ಲಿ ನರ್ಸ್ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.
ಹಸಿರು ವಲಯದಲ್ಲಿ ಬರುವ ದಾವಣಗೆರೆಯಲ್ಲಿ ಸೋಂಕು ಮತ್ತೆ ಕಾಣಿಸಿಕೊಂಡಿದೆ. ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಸ್ಟಾಪ್ ನರ್ಸ್ ಒಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕು ಎಲ್ಲಿಂದ ಬಂತು ಎಂಬ ಮಾಹಿತಿ ಸರಿಯಾಗಿ ಸಿಗ್ತಿಲ್ಲ. ಇದ್ರ ಬಗ್ಗೆ ಆರೋಗ್ಯ ಅಧಿಕಾರಿಗಳು ಮಾಹಿತಿ ಕಲೆ ಹಾಕ್ತಿದ್ದಾರೆ. ನರ್ಸ್ 20 ಜನರ ಜೊತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 534ಕ್ಕೆ ಏರಿಕೆ ಕಂಡಿದೆ. ದೇಶದಲ್ಲೂ ಕೊರೊನಾ ಸೋಂಕಿನ ಅಬ್ಬರ ಜಾಸ್ತಿಯಾಗಿದೆ. 24 ಗಂಟೆಯಲ್ಲಿ 73 ಮಂದಿ ಸಾವನ್ನಪ್ಪಿದ್ದಾರೆ.