alex Certify ವಿದ್ಯುತ್ ಸಮಸ್ಯೆ……ಜನರೇಟರ್ ಗೆ ಡೀಸೆಲ್ ಇಲ್ಲ……ಆಕ್ಸಿಜನ್ ಪೂರೈಕೆಯಾಗದೇ ಆಸ್ಪತ್ರೆಯಲ್ಲಿಯೇ ಪ್ರಾಣಬಿಟ್ಟ ಸೋಂಕಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್ ಸಮಸ್ಯೆ……ಜನರೇಟರ್ ಗೆ ಡೀಸೆಲ್ ಇಲ್ಲ……ಆಕ್ಸಿಜನ್ ಪೂರೈಕೆಯಾಗದೇ ಆಸ್ಪತ್ರೆಯಲ್ಲಿಯೇ ಪ್ರಾಣಬಿಟ್ಟ ಸೋಂಕಿತ

ಯಾದಗಿರಿ: ರಾಜ್ಯದ ಜಿಲ್ಲೆಗಳಲ್ಲಿ ಕೋವಿಡ್ ಆಸ್ಪತ್ರೆಗಳಲ್ಲಿನ ಸೋಂಕಿತರ ದುಃಸ್ಥಿತಿ ಯಾರೂ ಕೇಳುವವರಿಲ್ಲ. ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಾದರೆ ಇದ್ದ ಆಕ್ಸಿಜನ್ ಕೂಡ ಪೂರೈಕೆ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿವೆ ಜಿಲ್ಲಾಸ್ಪತ್ರೆಗಳು.

ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಿಂದ ಆಕ್ಸಿಜನ್ ಪೂರೈಕೆಯಾಗದೇ ಕೊರೊನಾ ಸೋಂಕಿತ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಮುದ್ನಾಳ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ.

ನಾಳೆ ಲಸಿಕೆ ಪಡೆಯಲು ಈ ವಯೋಮಾನದವರು ಆಸ್ಪತ್ರೆ ಬಳಿ ಹೋಗಬೇಡಿ – ಆರೋಗ್ಯ ಸಚಿವ ಸುಧಾಕರ್ ಹೇಳಿಕೆ

ವಿದ್ಯುತ್ ಸಮಸ್ಯೆಯಾದ ಕಾರಣ ಆಕ್ಸಿಜನ್ ಸಿಲಿಂಡರ್ ವರ್ಕ್ ಆಗಿಲ್ಲ. ಜನರೇಟರ್ ಮೂಲಕ ವಿದ್ಯುತ್ ಸಮಸ್ಯೆ ಬಗೆಹರಿಸಬೇಕೆಂದರೆ ಜನರೇಟರ್ ಗೆ ಡೀಸೆಲ್ ಖಾಲಿಯಾಗಿದೆ. ಹೀಗಾಗಿ ಜನರೇಟರ್ ಕೂಡ ಸ್ಟಾರ್ಟ್ ಆಗಿಲ್ಲ. ಅಷ್ಟೊತ್ತಿಗಾಗಲೇ ಕೊರೊನಾ ಸೋಂಕಿತ ವ್ಯಕ್ತಿ ಪ್ರಾಣವಾಯುಗಾಗಿ ಪರದಾಡಿ ಮೃತಪಟ್ಟಿದ್ದಾರೆ. ಆಸ್ಪತ್ರೆಯ ದುರವಸ್ಥೆಗೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...