alex Certify ‘ಲಾಕ್ ಡೌನ್’ ಅವಧಿಯನ್ನು ಸದುಪಯೋಗಪಡಿಸಿಕೊಂಡ ಸಹೋದರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಾಕ್ ಡೌನ್’ ಅವಧಿಯನ್ನು ಸದುಪಯೋಗಪಡಿಸಿಕೊಂಡ ಸಹೋದರರು

ಕರೋನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್ಡೌನ್ ನಿಂದಾಗಿ ಸಾರ್ವಜನಿಕರು ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ. ಈ ಸಂದರ್ಭದಲ್ಲಿ ಬಹಳಷ್ಟು ಮಂದಿ ಟಿವಿ ವೀಕ್ಷಣೆ ಮಾಡುವ ಅಥವಾ ಮೊಬೈಲ್ ಗೇಮ್ ಆಡುವ ಮೂಲಕ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ.

ಆದರೆ ಈ ಮೂವರು ಸಹೋದರರು ಮಾತ್ರ ಲಾಕ್ಡೌನ್ ಅವಧಿಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹೊಸ್ತೋಟ ಗ್ರಾಮದ ಪನ್ನಗ, ಪವನ ಹಾಗೂ ಪ್ರಸನ್ನ ಎಂಬವರೇ ಈ ಅಪೂರ್ವ ಸಹೋದರರು.

ಈ ಮೂವರು ಸೇರಿಕೊಂಡು ತಮ್ಮ ತೋಟದಲ್ಲಿ 20 ಅಡಿ ಆಳದ ಬಾವಿ ತೋಡಿದ್ದಾರೆ. ಮನೆಯಲ್ಲಿದ್ದ ಸಲಕರಣೆಗಳನ್ನೇ ಬಳಸಿ ಈ ಬಾವಿ ತೋಡಲಾಗಿದ್ದು, ಪ್ರತಿದಿನ ನಾಲ್ಕರಿಂದ ಆರು ತಾಸು ಕೆಲಸ ಮಾಡುತ್ತಿದ್ದರಂತೆ. ಈಗಾಗಲೇ ಬಾವಿಯಲ್ಲಿ ನೀರು ಬಂದಿದ್ದು, ಪಂಪ್ ಮೂಲಕ ಈ ನೀರನ್ನು ಹೊರ ಹಾಕಿ ಇನ್ನೂ ನಾಲ್ಕೈದು ಅಡಿ ತೋಡುವ ಉದ್ದೇಶವನ್ನು ಈ ಸಹೋದರರು ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...