alex Certify ಯಾರನ್ನು ನಂಬುತ್ತೀವೋ ಅವರೇ ಕುತ್ತಿಗೆ ಕೊಯ್ಯುತ್ತಾರೆ; ಹೋಗುವವರು ಹೋಗಲಿ ಎಂದ ಕುಮಾರಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾರನ್ನು ನಂಬುತ್ತೀವೋ ಅವರೇ ಕುತ್ತಿಗೆ ಕೊಯ್ಯುತ್ತಾರೆ; ಹೋಗುವವರು ಹೋಗಲಿ ಎಂದ ಕುಮಾರಸ್ವಾಮಿ

ಮೈಸೂರು: ಮಧು ಬಂಗಾರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇದರಲ್ಲಿ ಯಾವುದೇ ವಿಶೇಷವಿಲ್ಲ. ಕಳೆದ 1 ವರ್ಷದಿಂದ ನಡೆಯುತ್ತಿರುವ ಬೆಳವಣಿಗೆ. ಜೆಡಿಎಸ್ ಹುಟ್ಟಿದಾಗಿನಿಂದ ಇದೇ ಆಗಿದೆ. ದೇವೇಗೌಡರ ಬೆನ್ನಿಗೆ ಚೂರಿ ಹಾಕೋದೇ ಆಗಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಬಾಗಿಲು ತೆರೆದಿದೆ ಹೋಗುವವರು ಹೋಗಬಹುದು, ಬರುವವರು ಬರಬಹುದು. ಪಕ್ಷ ಬಿಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಹಳಬರು ಹೋದರೆ ಹೊಸಬರು ಬರುತ್ತಾರೆ. ಜೆಡಿಎಸ್ ನಲ್ಲಿ ಅಧಿಕಾರ, ಎಲ್ಲವನ್ನೂ ಅನುಭವಿಸಿ ಈಗ ಪಕ್ಷ ತೊರೆದು ಹೋಗುತ್ತಿರುವುದು ಹೊಸದೇನಲ್ಲ. ಇದರಿಂದ ಪಕ್ಷಕ್ಕೆ ನಷ್ಟವಿಲ್ಲ ಎಂದರು.

ಸಂಸ್ಕೃತ ಶ್ಲೋಕದ ಮೂಲಕ ಅಳಿಯನಿಗೆ ಹರಸಿದ ಉತ್ತರಾಖಂಡ ಸಿಎಂ ಅತ್ತೆ

ದೇವೇಗೌಡರು ಯಾರನ್ನು ಬೆಳೆಸಿದರೋ, ಯಾರನ್ನು ಹೆಚ್ಚು ನಂಬಿದ್ದರೋ ಅವರೇ ಇಂದು ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಹೋಗುವಾಗ ಏನೇನೋ ನೆಪ, ಸಬೂಬು ಕೊಟ್ಟು ಹೋಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...