alex Certify ಮುನಿರತ್ನಗೆ ಶೀಘ್ರ ಮಂತ್ರಿ ಸ್ಥಾನ: ನೂತನ ಸಚಿವ ಉಮೇಶ್ ಕತ್ತಿ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುನಿರತ್ನಗೆ ಶೀಘ್ರ ಮಂತ್ರಿ ಸ್ಥಾನ: ನೂತನ ಸಚಿವ ಉಮೇಶ್ ಕತ್ತಿ ಹೇಳಿಕೆ

ಬೆಂಗಳೂರು: ಶೀಘ್ರದಲ್ಲಿಯೇ ಶಾಸಕ ಮುನಿರತ್ನ ಅವರಿಗೂ ಸಚಿವ ಸ್ಥಾನ ಸಿಗಲಿದೆ. ಹೆಚ್.ವಿಶ್ವನಾಥ್ ಕೂಡ ಮಂತ್ರಿಯಾಗಲಿದ್ದಾರೆ ಎಂದು ನೂತನ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಕತ್ತಿ, ಮುನಿರತ್ನ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ವಿಚಾರವಾಗಿ ಮಾತನಾಡುತ್ತಾ, ಕೆಲವೇ ದಿನಗಳಲ್ಲಿ ಮುನಿರತ್ನ ಮಂತ್ರಿಯಾಗಲಿದ್ದಾರೆ. ಅವರ ವಿರುದ್ಧ ಕೆಲ ಕೋರ್ಟ್ ವ್ಯಾಜ್ಯಗಳಿರುವುದರಿಂದ ಮಂತ್ರಿ ಸ್ಥಾನ ನೀಡಿಲ್ಲ. ಅದೆಲ್ಲವೂ ಮುಗಿಯುತ್ತಿದ್ದಂತೆಯೇ ಶೀಘ್ರದಲ್ಲೇ ಸಚಿವರಾಗಲಿದ್ದಾರೆ ಎಂದರು.

ಸಂಪುಟ ವಿಸ್ತರಣೆ ವಿಚಾರವಾಗಿ ಹಲವರ ಅಸಮಾಧಾನವಿದೆ. ಆದರೆ ರಾಜ್ಯದಲ್ಲಿ 34 ಜನರು ಮಂತ್ರಿಯಾಗಬೇಕು. ಹಾಗಾಗಿ 34 ಜನರನ್ನು ಮಂತ್ರಿ ಮಾಡಿದ್ದಾರೆ. ಉಳಿದವರಿಗೂ ಸ್ಥಾನ ಸಿಗಲಿದೆ. ಒಂದಲ್ಲ ಒಂದು ದಿನ ಎಲ್ಲರಿಗೂ ಅಧಿಕಾರ ಸಿಗುತ್ತೆ. 224 ಶಾಸಕರೂ ಮಂತ್ರಿಗಳಾಗುತ್ತಾರೆ. ನಾನು ಒಂದೂವರೆ ವರ್ಷ ಕಾದಿದ್ದೆ. ಈಗ ಮಂತ್ರಿಯಾಗಿದ್ದೇನೆ. ಹಾಗೇ ಕಾಯಲೇಬೇಕು ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...