alex Certify ಮುಗಿದ ಶ್ರಾವಣ: ಮಾಂಸದಂಗಡಿಗಳ ಮುಂದೆ ಸಾಲುಗಟ್ಟಿ ನಿಂತ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಗಿದ ಶ್ರಾವಣ: ಮಾಂಸದಂಗಡಿಗಳ ಮುಂದೆ ಸಾಲುಗಟ್ಟಿ ನಿಂತ ಜನ

1 ತಿಂಗಳ ಹಿಂದೆ ಆರಂಭವಾಗಿದ್ದ ಶ್ರಾವಣ ಮಾಸ ಈಗ ಮುಗಿದಿದೆ. ಗುರುವಾರದಂದೇ ಶ್ರಾವಣ ಅಂತ್ಯಗೊಂಡಿದ್ದರೂ ಬಹುತೇಕರು ಗೌರಿ – ಗಣೇಶ ಹಬ್ಬ ಮುಗಿಯುವವರೆಗೂ ಕಟ್ಟುನಿಟ್ಟಾಗಿ ಶ್ರಾವಣ ಮಾಸವನ್ನು ಆಚರಿಸುತ್ತಾರೆ.

ಈ ಒಂದು ತಿಂಗಳು ಮಾಂಸಹಾರದಿಂದ ದೂರವಿದ್ದವರು ಶನಿವಾರ ಗೌರಿ – ಗಣೇಶ ಹಬ್ಬ ಪೂರ್ಣಗೊಳ್ಳುತ್ತಿದ್ದಂತೆ ಮಟನ್ – ಚಿಕನ್ ಅಂಗಡಿಗಳ ಮುಂದೆ ಇಂದು ಬೆಳಗ್ಗಿನಿಂದಲೇ ಸಾಲುಗಟ್ಟಿ ನಿಂತಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಪಾಲು ಹಾಕುವ ಪದ್ಧತಿ ಇದ್ದು, ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಶ್ರಾವಣ ಮಾಸದ ಕಾರಣಕ್ಕೆ ವ್ಯಾಪಾರ ಕುಂಠಿತವಾಗಿದ್ದ ಮಟನ್ – ಚಿಕನ್ ಅಂಗಡಿಗಳ ಮಾಲೀಕರು ಇನ್ನು ಮುಂದೆ ಎಂದಿನ ರೀತಿಯಲ್ಲಿ ನಮ್ಮ ವ್ಯಾಪಾರ ನಡೆಯುತ್ತದೆಂಬ ಸಂತಸದಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...