alex Certify ಮಠಗಳಿಗೆ ಅನುದಾನ ನೀಡಲು ಮುಂದಾದ ಬಿಎಸ್‌ವೈ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಠಗಳಿಗೆ ಅನುದಾನ ನೀಡಲು ಮುಂದಾದ ಬಿಎಸ್‌ವೈ ಸರ್ಕಾರ

B. S. Yediyurappa lead Government has completed one year| ಒಂದು ವರ್ಷ ಪೂರೈಸಿದ ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರ

ರಾಜ್ಯದಲ್ಲಿರುವ 39 ಮಠಗಳಿಗೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಒಟ್ಟು 60 ಕೋಟಿ ಅನುದಾನ ನೀಡಲು ನಿರ್ಧಾರ ಮಾಡಿದ್ದರು. ಆದರೆ ಇದನ್ನು ಮರು ಹಂಚಿಕೆ ಮಾಡಿರುವ ಬಿಎಸ್‌ವೈ ಸರ್ಕಾರ 39 ಮಠಗಳಿಗೆ ತಲಾ ಒಂದು ಕೋಟಿ ನೀಡಲು ನಿರ್ಧಾರ ಮಾಡಿದೆ.

ಈಗಾಗಲೇ ಸರ್ಕಾರ ಕೋವಿಡ್‌ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಮಠಮಾನ್ಯಗಳು ಸೇರಿದಂತೆ ಎಲ್ಲದರ ಮೇಲೂ ಈ ಕೊರೊನಾ ಎಫೆಕ್ಟ್ ಬಿದ್ದಿದೆ. ಹೀಗಾಗಿ ಒಂದು ಮಠಕ್ಕೆ ಹೆಚ್ಚು ಒಂದು ಮಠಕ್ಕೆ ಕಡಿಮೆ ನೀಡುವ ಬದಲು ಎಲ್ಲಾ 39 ಮಠಗಳಿಗೂ ಸಮಾನವಾಗಿ ಅನುದಾನ ನೀಡಲು ಮುಂದಾಗಿದೆ ಸರ್ಕಾರ.

ಇನ್ನು ಈ ಅನುದಾನ ನೀಡುವ ಬಗ್ಗೆ ಆರ್ಥಿಕ ಇಲಾಖೆ ಅನುಮತಿ ಪಡೆಯಬೇಕಾಗಿದೆ. ಇದಕ್ಕಾಗಿ ಇಲಾಖೆಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಆರ್ಥಿಕ ಇಲಾಖೆ ಅನುಮತಿ ನೀಡಿದ ನಂತರ ಮಠಗಳಿಗೆ ಅನುದಾನ ಹೋಗಲಿದೆ. ಕೊರೊನಾ ಸಂಕಷ್ಟದ ನಡುವೆಯೂ ಮಠಗಳಿಗೆ ಸರ್ಕಾರ ಅನುದಾನ ನೀಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...