alex Certify ಭೂರಿಭೋಜನ ಸವಿದ ’ಸಾರಥಿ’; ಸಿನಿಮಾ, ರಾಜಕೀಯ, ಕ್ರಿಕೆಟ್ ತುಂಬಾ ಅದೃಷ್ಟ ಎಂದ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂರಿಭೋಜನ ಸವಿದ ’ಸಾರಥಿ’; ಸಿನಿಮಾ, ರಾಜಕೀಯ, ಕ್ರಿಕೆಟ್ ತುಂಬಾ ಅದೃಷ್ಟ ಎಂದ ಸಚಿವ

ಬೆಂಗಳೂರು: ನ.3ರಂದು ಆರ್.ಆರ್.ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟಿ ಅಮೂಲ್ಯ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಕಂದಾಯ ಸಚಿವ ಆರ್. ಅಶೋಕ್ ಮನೆಯಲ್ಲಿ ಮಧ್ಯಾಹ್ನ ಭೂರಿಭೋಜನ ಸವಿದಿದ್ದಾರೆ.

ಚುನಾವಣಾ ಪ್ರಚಾರದ ನಡುವೆ ಮಧ್ಯಾಹ್ನ ಊಟದ ವಿರಾಮ ನೀಡಲಾಗಿದ್ದು, ಜಾಲಹಳ್ಳಿಯಲ್ಲಿರುವ ಸಚಿವ ಆರ್. ಅಶೋಕ್ ನಿವಾಸದಲ್ಲಿ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ನಟ ದರ್ಶನ್ ಸೇರಿದಂತೆ ಎಲ್ಲರೂ ಸಚಿವರ ಮನೆಯಲ್ಲಿ ಅಪ್ಪಟ ಸಸ್ಯಾಹಾರಿ ಭೋಜನ ಚಪಾತಿ-ಪಲ್ಯ, ಮುದ್ದೆ-ಸಾರು, ಈರುಳ್ಳಿ ಪಕೋಡ ಸವಿದಿದ್ದಾರೆ.

ಊಟದ ಬಳಿಕ ಲೋಕಾಭಿರಾಮವಾಗಿ ಮಾತನಾಡುತ್ತ ರಾಕ್ ಲೈನ್ ವೆಂಕಟೇಶ್ ಕಾಲೆಳೆದ ಸಚಿವ ಆರ್. ಅಶೋಕ್, ದರ್ಶನ್ ಗಿಂತ ನೀವೇ ಸ್ಲಿಮ್ ಆಗಿದ್ದೀರಾ ಎಂದರು. ಇನ್ನು ರಾಜಕೀಯ, ಸಿನಿಮಾ, ಕ್ರಿಕೆಟ್ ಈ ಮೂರು ಒಂದು ರೀತಿಯ ಅದೃಷ್ಣವಿದ್ದಂತೆ. ನೀವೆಲ್ಲ ಸುಖವಾಗಿದ್ದರೆ ಚಿತ್ರರಂಗ, ಮಾಲ್, ಸ್ಕೂಲ್ ಎಲ್ಲ ಸುಖವಾಗಿ ನೆಮ್ಮದಿಯಿಂದ ಇರುತ್ತೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...