alex Certify ಬೆಂಗಳೂರು ಗಲಭೆ: ವಾರದ ಹಿಂದೆ ನಡೆದಿತ್ತಾ ಸ್ಕೆಚ್..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು ಗಲಭೆ: ವಾರದ ಹಿಂದೆ ನಡೆದಿತ್ತಾ ಸ್ಕೆಚ್..?

ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಕೆಲವೆಡೆ ಪ್ರತಿಭಟನೆ ನಡೆಯುವ ಸಾಧ್ಯತೆಯಿದ್ದು, ಅದನ್ನು ತಡೆಯಲು ಪೊಲೀಸರು ಸಜ್ಜಾಗಿದ್ದಾರೆ.

ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಆದ್ರೆ ಈ ಘಟನೆಗೆ ಒಂದು ವಾರದ ಹಿಂದೆಯೇ ಪ್ಲಾನ್ ನಡೆದಿತ್ತು ಎನ್ನಲಾಗ್ತಿದೆ. ಗಲಾಟೆಯಲ್ಲಿ ಪಾಲ್ಗೊಳ್ಳಲು ಬೇರೆ ಊರಿನಿಂದ ಜನರು ಬಂದಿದ್ದರು ಎನ್ನಲಾಗ್ತಿದೆ. ಇದ್ರ ಜೊತೆಗೆ ಘಟನೆ ವೇಳೆ ಸಾವನ್ನಪ್ಪಿರುವ 40 ವರ್ಷದ ವ್ಯಕ್ತಿ ಗುರುತು ಇನ್ನೂ ಪತ್ತೆಯಾಗಿಲ್ಲ. ಮತ್ತಿಬ್ಬರ ಗುರುತು ಪತ್ತೆಯಾಗಿದೆ.

ಇನ್ನು ಟೌನ್ ಹಾಲ್ ಬಳಿ ಯಾವುದೇ ಪ್ರತಿಭಟನೆ ನಡೆಯುವುದಿಲ್ಲ. ಯಾರೂ ಪ್ರತಿಭಟನೆ ನಡೆಸಲು ಸೂಚನೆ ನೀಡಿಲ್ಲ.‌ ಷರಿಯತ್ ಯಾವುದೇ ಸೂಚನೆ ನೀಡಿಲ್ಲ. ದಯವಿಟ್ಟು ಟೌನ್ ಹಾಲ್ ಬಳಿ ಬರಬೇಡಿ ಎಂದು ಶಾಸಕ ಜಮೀರ್ ಅಹ್ಮದ್, ಮುಸ್ಲಿಂ ಮುಖಂಡರಿಗೆ ಮನವಿ ಮಾಡಿದ್ದಾರೆ.

ಇನ್ನು ಎಸ್.ಡಿ.ಪಿ.ಐ. ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಕೆಲ ಮಾಹಿತಿಯನ್ನು ನೀಡಿದೆ. ಘಟನೆಯ ರೂವಾರಿ ಸೈಯದ್ ಎನ್ನಲಾಗಿದೆ. ಆತನನ್ನು ಈಗಾಗಲೇ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...