alex Certify ‘ದೇಶದ ಏಳಿಗೆಗಾಗಿ ಜೀವನ ಮುಡಿಪಿಟ್ಟ ಮೋದಿಯಂಥ ಪ್ರಧಾನಿ ಇದುವರೆಗೂ ಹುಟ್ಟಿರಲಿಲ್ಲ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದೇಶದ ಏಳಿಗೆಗಾಗಿ ಜೀವನ ಮುಡಿಪಿಟ್ಟ ಮೋದಿಯಂಥ ಪ್ರಧಾನಿ ಇದುವರೆಗೂ ಹುಟ್ಟಿರಲಿಲ್ಲ’

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ದಿನದಂದು ಬಿಜೆಪಿ ವತಿಯಿಂದ ‘ನಮೋ ದಿವಸ್’ ಆಚರಣೆ ಮಾಡಿದೆ. ನರೇಂದ್ರ ಮೋದಿಯವರಿಗೆ ದೇಶ-ವಿದೇಶಗಳ ಗಣ್ಯರಿಂದ ಹುಟ್ಟುಹಬ್ಬದ ಶುಭಾಶಯಗಳು ಹರಿದುಬಂದಿವೆ.

ಮೈಸೂರಿನಲ್ಲಿ ಶಾಸಕ ಎಸ್.ಎ. ರಾಮದಾಸ್ ಆಯೋಜಿಸಿದ್ದ ‘ನಮೋ ದಿವಸ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿರುವ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ, ದೇಶದ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಂತಹ ಮೋದಿಯವರಂತಹ ಪ್ರಧಾನಿ ಇದುವರೆಗೂ ಹುಟ್ಟಿರಲಿಲ್ಲ ಎಂದು ಹೇಳಿದ್ದಾರೆ.

2024 ಹಾಗೂ 2029 ರ ಚುನಾವಣೆಯಲ್ಲೂ ನರೇಂದ್ರ ಮೋದಿಯವರು ಸಂಪೂರ್ಣ ಬಹುಮತದೊಂದಿಗೆ ಗೆದ್ದು ಬರಬೇಕು. 2029 ರ ಕೆಲವು ಸಮಯ ಪ್ರಧಾನಿ ಹುದ್ದೆಯಲ್ಲಿ ಮುಂದುವರೆದು ಬಳಿಕ ಬೇರೊಬ್ಬ ಸಮರ್ಥ ನಾಯಕರಿಗೆ ಅಧಿಕಾರ ಬಿಟ್ಟುಕೊಡಬೇಕು ಎಂದು ಎಸ್.ಎಲ್. ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...