ವಾಹನ ಚಾಲನೆ ವೇಳೆ ಬಲು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರಲ್ಲೂ ರಿವರ್ಸ್ ತೆಗೆಯುವಾಗ ಮತ್ತಷ್ಟು ಜಾಗರೂಕತೆಯಿಂದ ಇರಬೇಕಾಗುತ್ತದೆ. ಒಂದಿಷ್ಟು ಮೈಮರೆತರೂ ಅನಾಹುತ ಖಚಿತ.
ಇದಕ್ಕೆ ಉದಾಹರಣೆ ಎಂಬಂತೆ ಕೇವಲ ಒಂದು ವರ್ಷದ ಹಸುಗೂಸೊಂದು ತನ್ನ ತಂದೆಯ ಕಾರಿಗೆ ಬಲಿಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಚಿಕ್ಕಹೊಳೆ ಬಳಿಯ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಶಕ್ತಿವೇಲು ಎಂಬವರು ಶೆಡ್ ನಿಂದ ಕಾರು ತೆಗೆಯಲು ಮುಂದಾಗಿದ್ದು, ಈ ವೇಳೆ ಅವರನ್ನು ಹಿಂಬಾಲಿಸಿಕೊಂಡು ಬಂದ ಪುತ್ರ 1 ವರ್ಷದ ರೋಹಿತ್ ಕಾರು ಹಿಂಬದಿ ಇರುವುದು ಅವರ ಗಮನಕ್ಕೆ ಬಂದಿಲ್ಲ. ರಿವರ್ಸ್ ತೆಗೆದ ರಭಸಕ್ಕೆ ಮಗು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.