alex Certify ಟ್ಯೂಷನ್ ಗೆ ಹೋಗಿದ್ದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ಯೂಷನ್ ಗೆ ಹೋಗಿದ್ದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ

ರಾಯಚೂರು: ಮನೆ ಪಾಠಕ್ಕೆಂದು ಹೋದ 8 ನೇ ತರಗತಿ ಬಾಲಕ ಇದೀಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆ ಕೃಷ್ಣಗಿರಿ ಹಿಲ್ಸ್ ನಲ್ಲಿ ನಡೆದಿದೆ.

ಆದರ್ಶ್ (13) ಮೃತ ಬಾಲಕ. ಟ್ಯೂಷನ್ ಗಾಗಿ ಆದರ್ಶ ನಿನ್ನೆ ಮನೆಯಿಂದ ಹೋಗಿದ್ದಾನೆ. ಆದರೆ ರಾತ್ರಿಯಾದರೂ ವಾಪಸ್ ಮನೆಗೆ ಬಂದಿಲ್ಲ. ಇದರಿಂದ ಗಾಬರಿಗೊಂಡ ಮನೆಯವರು ಸದರಬಜಾರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ಬಾಲಕ ಆದರ್ಶ್ ಶವ ಕೆರೆಯಲ್ಲಿ ಪತ್ತೆಯಾಗಿದೆ.

ಟ್ಯೂಷನ್ ಮುಗಿಸಿ ಗೆಳೆಯರ ಜೊತೆ ವಾಪಸ್ ಆಗುತ್ತಿದ್ದಾಗ ಆದರ್ಶ್, ಗ್ರಾಮದ ಕೆರೆಗೆ ಈಜಲೆಂದು ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾರಣ ಆತನ ಬಟ್ಟೆಗಳು ಕೆರೆ ದಡದಲ್ಲಿ ಸಿಕ್ಕಿರುವುದು ಈ ಅನುಮಾನ ಮೂಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...