alex Certify ಗುಳುಂ ಮಾಡುವುದೇ ಬಿಜೆಪಿ ಅಜೆಂಡಾ; ಮೊದಲು ತೇಜಸ್ವಿ ಸೂರ್ಯ ಹಾಗೂ ಟೀಂ ಅನ್ನು ಬಂಧಿಸಬೇಕು; ಡಿ.ಕೆ.ಶಿವಕುಮಾರ್ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಳುಂ ಮಾಡುವುದೇ ಬಿಜೆಪಿ ಅಜೆಂಡಾ; ಮೊದಲು ತೇಜಸ್ವಿ ಸೂರ್ಯ ಹಾಗೂ ಟೀಂ ಅನ್ನು ಬಂಧಿಸಬೇಕು; ಡಿ.ಕೆ.ಶಿವಕುಮಾರ್ ಆಗ್ರಹ

ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣಕ್ಕೆ ಕೋಮು ಆಯಾಮ ನೀಡುತ್ತಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಮೂವರು ಶಾಸಕರ ಟೀಂ ನ್ನು ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕೋವಿಡ್ ವಾರ್ ರೂಂ ಗೆ ಹೋಗಿ ಬೆಡ್ ಬ್ಲಾಕಿಂಗ್ ಹಗರಣ ಬಯಲಿಗೆಳೆದ ತೇಜಸ್ವಿ ಸೂರ್ಯ ಕೇವಲ ಮುಸ್ಲಿಂ ಹೆಸರನ್ನು ಮಾತ್ರ ಓದಿ ಹೇಳುವ ಮೂಲಕ ಪ್ರಕರಣಕ್ಕೆ ಕೋಮು ಆಯಾಮದ ಬಣ್ಣ ನೀಡುತ್ತಿದ್ದಾರೆ. ವಾರ್ ರೂಂ ನಲ್ಲಿ ಮುಸ್ಲಿಂ ಸಮುದಾಯದವರು ಬಿಟ್ಟರೆ ಬೇರೆ ಯಾರೂ ಇರಲಿಲ್ಲವೇ? ಮೊದಲು ತೇಜಸ್ವಿ ಸೂರ್ಯ ಹಾಗೂ ಅವರ ಟೀಂ ನ್ನು ಬಂಧಿಸಬೇಕು ಎಂದರು.

ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈಮೀರಿ ಹೋಗಿದೆ. ಸೋಂಕು ನಿಯಂತ್ರಣಕ್ಕೆ ಸರ್ಕಾರ ವಿಫಲವಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಹೋದ ಸೋಂಕಿತರು ವಾಪಸ್ ಬರುತ್ತಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಿಗೆ ಹೋದವರು ವಾಪಸ್ ಬರುತ್ತಿಲ್ಲ. ಸಿಎಂ 3 ದಿನಗಳಲ್ಲಿ ಕೊರೊನಾದಿಂದ ಮುಕ್ತರಾಗಿ ಬರುತ್ತಿದ್ದಾರೆ. ನಾನು ಕೂಡ ಕೊರೊನಾದಿಂದ ಮುಕ್ತನಾಗಿ ಬಂದಿದ್ದೇನೆ. ಆದರೆ ಸರ್ಕಾರಿ ಆಸ್ಪತ್ರೆಗೆ ದಾಖಲಾದವರು ಸತ್ತೇ ಹೋಗುತ್ತಿದ್ದಾರೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಎಂ ಯಡಿಯೂರಪ್ಪನವರು ಮೊದಲು ಮೆಡಿಕಲ್ ಕಾಲೇಜು ಆಡಳಿತ ಮಂಡಳಿಗಳನ್ನು ಕರೆದು ಮಾತನಾಡಬೇಕು. ಜನರ ಪ್ರಾಣ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಬೆಡ್ ಬ್ಲಾಕಿಂಗ್ ಹಗರಣದ ತನಿಖೆಯನ್ನು ಸಂದೀಪ್ ಪಾಟೀಲ್ ಅವರಿಗೆ ಒಪ್ಪಿಸಲಾಗಿದೆ. ನಮಗೆ ಸಂದೀಪ್ ಪಾಟೀಲ್ ಸೇರಿದಂತೆ ಯಾರ ಮೇಲೂ ನಂಬಿಕೆಯಿಲ್ಲ. ಮುಖರ್ಜಿ ಮೇಲೂ ನಂಬಿಕೆಯಿಲ್ಲ, ಅನುಚೇತ್ ಮೇಲೂ ಇಲ್ಲ. ಈಗಾಗಲೇ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ನಡೆದು ಪ್ರಕರಣ ದಾಖಲಾಗಿ ಒಂದುವರೆ ತಿಂಗಳಾಯಿತು. ಏನು ಮಾಡಿದರು? ಪ್ರಕರಣವನ್ನೆ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಹೀಗಿರುವಾಗ ಬೆಡ್ ಬ್ಲಾಕಿಂಗ್ ಹಗರಣ ಎಷ್ಟರ ಮಟ್ಟಿಗೆ ಸತ್ಯಾಸತ್ಯತೆ ಹೊರಬರಲಿದೆ? ಬಿಜೆಪಿ ಸರ್ಕಾರದ ಮುಖ್ಯ ಅಜೆಂಡಾವೇ ಗುಳುಂ ಮಾಡುವುದು. ಎಲ್ಲವನ್ನೂ ಗುಳುಂ ಮಾಡುವುದೇ ಅವರ ಕೆಲಸ ಎಂದು ವಾಗ್ದಾಳಿ ನಡೆಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...