alex Certify ಕೋರ್ಟ್ ಆದೇಶದಿಂದ ತಬ್ಬಿಬ್ಬು; ಜೈಲಾಧಿಕಾರಿಗಳ ಮುಂದೆ ಕಣ್ಣೀರಿಟ್ಟ ನಟಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋರ್ಟ್ ಆದೇಶದಿಂದ ತಬ್ಬಿಬ್ಬು; ಜೈಲಾಧಿಕಾರಿಗಳ ಮುಂದೆ ಕಣ್ಣೀರಿಟ್ಟ ನಟಿಯರು

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಅವರ ಜಾಮೀನು ಅರ್ಜಿಯನ್ನು ಎನ್ ಡಿ ಪಿಎಸ್ ನ್ಯಾಯಾಲಯ ವಜಾಗೊಳಿಸಿರುವ ಬೆನ್ನಲ್ಲೇ ನಾಳೆ ಇಬ್ಬರು ನಟಿಯರು ಜೈಲ್ ಸೆಲ್ ಗೆ ಶಿಫ್ಟ್ ಆಗಲಿದ್ದಾರೆ. ಕೋರ್ಟ್ ಆದೇಶದಿಂದ ಶಾಕ್ ಗೊಳಗಾದ ನಟಿಯರು ಜೈಲಿನಲ್ಲಿಯೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿಯರಿಬ್ಬರಿಗೂ ಇಂದು ಎನ್ ಡಿ ಪಿ ಎಸ್ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿರುವುದರಿಂದ ನಟಿಯರು ಮತ್ತಷ್ಟು ದಿನಗಳ ಕಾಲ ಜೈಲಿನಲ್ಲಿ ಕಾಲ ಕಳೆಯಬೇಕಿದೆ. ಕೋರ್ಟ್ ಆದೇಶದ ಬೆನ್ನಲ್ಲೇ ನಾಳೆ ರಾಗಿಣಿ ಹಾಗೂ ಸಂಜನಾರನ್ನು ಪರಪ್ಪನ ಅಗ್ರಹಾರ ಜೈಲಿನ ಸೆಲ್ ಗೆ ಶಿಫ್ಟ್ ಮಾಡಲಾಗುತ್ತಿದೆ. ಇಬ್ಬರೂ ಒಂದೇ ಸೆಲ್ ಗೆ ಶಿಫ್ಟ್ ಆಗಲಿದ್ದು, ಹತ್ತು ದಿನಗಳ ಕಾಲ ನಟಿಯರು ಸೆಲ್ ನಿಂದ ಹೊರಬರುವಂತಿಲ್ಲ.

ಜಾಮೀನು ನಿರೀಕ್ಷೆಯಲ್ಲಿದ್ದ ನಟಿಯರಿಗೆ ಕೋರ್ಟ್ ಆದೇಶ ಶಾಕ್ ನೀಡಿದ್ದು, ಇಬ್ಬರು ನಟಿಯರು ಕಣ್ಣೀರಿಟ್ಟಿದ್ದಾರೆ. ಜೈಲಧಿಕಾರಿಗಳ ಮುಂದೆ ಕೈಜೋಡಿಸಿ ತಮ್ಮನ್ನು ಬಿಟ್ಟುಬಿಡುವಂತೆ ಗೋಗರೆದಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...