ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಕೇಂದ್ರ ಸರ್ಕಾರ ಸೋಂಕು ಪೀಡಿತರ ಕ್ವಾರಂಟೈನ್ ಹಾಗೂ ಡಿಸ್ಚಾರ್ಜ್ ಕುರಿತಂತೆ ಮಾರ್ಗಸೂಚಿ ರೂಪಿಸಿದ್ದು, ಇದೀಗ ಇದನ್ನು ಆಧರಿಸಿ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಇದರನ್ವಯ ರೋಗಿಯನ್ನು 14 ದಿನಗಳ ಬದಲಿಗೆ 10 ದಿನಗಳಲ್ಲಿ ಬಿಡುಗಡೆ ಮಾಡಬಹುದಾಗಿದೆ. ಆದರೆ ಸೋಂಕಿತ ರೋಗಿ ಬಿಡುಗಡೆಯಾಗುವ ಮುನ್ನ ಮೂರು ದಿನಗಳ ಮುಂಚಿತವಾಗಿ ಯಾವುದೇ ರೋಗ ಲಕ್ಷಣಗಳನ್ನು ಹೊಂದಿರಬಾರದು ಎಂದು ತಿಳಿಸಲಾಗಿದೆ.
ಅಲ್ಲದೆ ಬಿಡುಗಡೆಗೂ ಮುನ್ನ ಆರ್.ಟಿ.- ಪಿಸಿಆರ್ ಪರೀಕ್ಷೆ ಮಾಡಬೇಕಿದ್ದು, ವರದಿ ನೆಗೆಟಿವ್ ಬಂದರೆ ಮಾತ್ರ ಡಿಸ್ಚಾರ್ಜ್ ಮಾಡಬಹುದಾಗಿದೆ. ಆದರೆ ಬಿಡುಗಡೆ ಹೊಂದಿದ ರೋಗಿಗಳು 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿ ಇರುವುದು ಕಡ್ಡಾಯವಾಗಿದೆ.