alex Certify ಎಣ್ಣೆ ಏಟಲ್ಲಿ ನದಿಗೆ ಹಾರಿದ್ದ ವಿಜ್ಞಾನಿಯ ರಕ್ಷಣೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಣ್ಣೆ ಏಟಲ್ಲಿ ನದಿಗೆ ಹಾರಿದ್ದ ವಿಜ್ಞಾನಿಯ ರಕ್ಷಣೆ..!

ಕುಡಿತದ ಅಮಲು ಏನನ್ನ ಬೇಕಾದರೂ ಮಾಡಿಸಬಲ್ಲದು ಅನ್ನೋದಕ್ಕೆ ಅನೇಕ ಉದಾಹರಣೆಗಳಿವೆ. ಇದೀಗ ಮತ್ತೊಂದು ಉದಾಹರಣೆ ಎಂಬಂತೆ ವಿಜ್ಞಾನಿಯೊಬ್ಬರು ಕುಡಿತದ ಅಮಲಿನಲ್ಲಿ ಹೊಳೆಗೆ ಹಾರಿದ ಘಟನೆ ಸುಳ್ಯದ ಕಡಬದಲ್ಲಿ ನಡೆದಿದೆ.

ಇಲ್ಲಿನ ಕೆಂಚಭಟ್ರೆ ಸಮೀಪ ಇರುವ ಭಾರತೀಯ ರಬ್ಬರ್ ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿರುವ ರವಿಚಂದ್ರನ್ ಕಂಠಪೂರ್ತಿ ಕುಡಿದು ಹೊಳೆಗೆ ಹಾರಿದ್ದಾರೆ. ತಕ್ಷಣ ಇವರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.

ರವಿಚಂದ್ರನ್ ತಮಿಳುನಾಡು ಮೂಲದವರು. ಕೆಲವು ತಿಂಗಳುಗಳ ಹಿಂದೆ ಇವರ ಕುಟುಂಬ ಕಡಬಕ್ಕೆ ಬಂದು ವಾಸವಾಗಿದ್ದರು. ಇನ್ನು ಈ ಘಟನೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಆದರೆ ವಿದ್ಯಾವಂತರೇ ಈ ರೀತಿ ದುಸ್ಸಾಹಸಕ್ಕೆ ಕೈ ಹಾಕಿದ್ದು ದುರಾದೃಷ್ಟಕರ ಸಂಗತಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...