alex Certify ಉದ್ಯೋಗಿಗಳನ್ನು ಉಳಿಸಲು ಆದೇಶ ಹೊರಡಿಸಿದರೆ ಸಾಲದು ಅಗತ್ಯ ಕ್ರಮ ಕೈಗೊಳ್ಳಬೇಕು: ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳನ್ನು ಉಳಿಸಲು ಆದೇಶ ಹೊರಡಿಸಿದರೆ ಸಾಲದು ಅಗತ್ಯ ಕ್ರಮ ಕೈಗೊಳ್ಳಬೇಕು: ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ

ಬೆಂಗಳೂರು: ಉದ್ಯೋಗಗಳನ್ನು ಉಳಿಸಲು ಕೇವಲ ಆದೇಶ ಪತ್ರಗಳು ಸಾಲದು, ತೆರಿಗೆ ಮನ್ನಾದಂತಹ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹಿಸಿದೆ.

ಕರ್ಫ್ಯೂ ಅವಧಿಯಲ್ಲಿ ಯಾವುದೇ ಉದ್ಯೋಗದಾತ ಸಂಸ್ಥೆಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವಂತಿಲ್ಲ. ಅಲ್ಲದೇ ವೇತನ ಕಡಿತಗೊಳಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಉದ್ಯಮಗಳು ಈಗಾಗಲೇ ಐಸಿಯುನಲ್ಲಿವೆ. ಈಗ ಮತ್ತೊಮ್ಮೆ ಲಾಕ್‌ಡೌನ್ ಜಾರಿಯಾಗಿದೆ. ಉದ್ಯೋಗಗಳನ್ನು ಉಳಿಸಲು ಕೇವಲ ಆದೇಶ ಪತ್ರಗಳು ಸಾಲುವುದಿಲ್ಲ, ತೆರಿಗೆ ಮನ್ನಾದಂತಹ ಅಗತ್ಯ ಕ್ರಮ ಕೈಗೊಳ್ಳಬೇಕು. ಉದ್ಯೋಗಗಳು ಉಳಿಯಲು ಉದ್ಯಮಗಳು ಉಳಿಯಬೇಕು ಎಂದು ಹೇಳಿದೆ.

ಕೇರಳ ಪೊಲೀಸರ ಕೋವಿಡ್ ಡಾನ್ಸ್ ಸಖತ್ ವೈರಲ್

ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳ ಮೂಲಕ ಕೇವಲ ಆದೇಶ ಹೊರಡಿಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಉದ್ಯಮಗಳನ್ನು ಉಳಿಸಿ, ತೆರಿಗೆ ಮನ್ನಾ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...