alex Certify ಅಡಿಕೆ ಮರದಲ್ಲಿ ಮೂಡಿದ ಗಣೇಶ: ಅಚ್ಚರಿಯಿಂದ ವೀಕ್ಷಿಸುತ್ತಿರುವ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡಿಕೆ ಮರದಲ್ಲಿ ಮೂಡಿದ ಗಣೇಶ: ಅಚ್ಚರಿಯಿಂದ ವೀಕ್ಷಿಸುತ್ತಿರುವ ಜನ

ಅಡಿಕೆ ಮರದಲ್ಲಿ ಗಣೇಶನ ಚಿತ್ರ ಮೂಡಿರುವ ಅಚ್ಚರಿಯ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕುಂದೂರು ಸಮೀಪದ ಎರೇಹಳ್ಳಿಯಲ್ಲಿ ನಡೆದಿದೆ. ಪ್ರಕೃತಿಯ ಈ ವಿಸ್ಮಯವನ್ನು ಗ್ರಾಮಸ್ಥರು ತಂಡೋಪತಂಡವಾಗಿ ಬಂದು ವೀಕ್ಷಿಸುತ್ತಿದ್ದಾರೆ.

ಎರೇಹಳ್ಳಿಯ ಗಿರೀಶ್ ಎಂಬವರ ತೋಟದಲ್ಲಿರುವ ಅಡಿಕೆ ಮರದಲ್ಲಿ ಶನಿವಾರದಂದು ಹೊಂಬಾಳೆ ಮೂಡಿದ್ದು, ಇದು ನೋಡಲು ಥೇಟ್ ಗಣೇಶನ ಮೂರ್ತಿಯಂತಿದೆ. ಇದರಿಂದ ಸಂತಸಗೊಂಡ ಗಿರೀಶ್ ಕುಟುಂಬ ಸಮೇತರಾಗಿ ಬಂದು ಪೂಜೆ ಸಲ್ಲಿಸಿದ್ದಾರೆ.

ನಾಲ್ಕೂವರೆ ವರ್ಷದ ಅಡಿಕೆ ಮರದಲ್ಲಿ ಮೂಡಿರುವ ಆಕೃತಿಗೆ ಗಣೇಶನ ಮುಖ ಹಾಗೂ ಸೊಂಡಿಲು ತರಹ ಇದ್ದು, ಈ ವಿಷಯ ಬಾಯಿಂದ ಬಾಯಿಗೆ ಹರಡುತ್ತಿದ್ದಂತೆ ಗ್ರಾಮಸ್ಥರು ತೋಟಕ್ಕೆ ಆಗಮಿಸಿ ಇದನ್ನು ವೀಕ್ಷಿಸಿ ಭಕ್ತಿಯಿಂದ ನಮಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...