alex Certify ಕಂಗನಾರನ್ನು ಬಂಧಿಸಲು ಕೋರಿ ನ್ಯಾಯಾಲಯದ ಮೊರೆ ಹೋದ ಜಾವೇದ್​ ಅಖ್ತರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಗನಾರನ್ನು ಬಂಧಿಸಲು ಕೋರಿ ನ್ಯಾಯಾಲಯದ ಮೊರೆ ಹೋದ ಜಾವೇದ್​ ಅಖ್ತರ್​..!

ಖ್ಯಾತ ಸಾಹಿತಿ ಜಾವೇದ್ ಅಖ್ತರ್​​ ನಟಿ ಕಂಗನಾ ರಣಾವತ್​ ವಿರುದ್ಧ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ವಿಚಾರದಲ್ಲಿ ದೊಡ್ಡ ಬೆಳವಣಿಗೆಯೊಂದು ಸಂಭವಿಸಿದೆ. ವಿಚಾರಣೆ ಹಾಜರಾಗದ ನಟಿ ಕಂಗನಾ ರಣಾವತ್​ ವಿರುದ್ಧ ಜಾವೇದ್​ ಅಖ್ತರ್​ ಬಂಧನದ ವಾರೆಂಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ವರದಿಗಳ ಪ್ರಕಾರ ನಟಿ ಕಂಗನಾ ರಣಾವತ್​ ಕಳೆದ 8 ಬಾರಿ ವಿಚಾರಣೆಗೆ ಗೈರಾಗಿದ್ದಾರೆ ಎನ್ನಲಾಗಿದೆ.

ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ನ್ಯಾಯಾಲಯವು ಈ ಬಾರಿ ವಿಚಾರಣೆಗೆ ಹಾಜರಾಗದ ನಟಿ ಕಂಗನಾಗೆ ವಿನಾಯ್ತಿ ನೀಡಿದೆ. ಆದರೆ ಮುಂದಿನ ವಿಚಾರಣೆ ವೇಳೆಯೂ ಇದು ಪುನರಾವರ್ತನೆಯಾದಲ್ಲಿ ಬಂಧನ ವಾರೆಂಟ್​ ಹೊರಡಿಸುವುದಾಗಿ ಖಡಕ್​ ಸೂಚನೆ ನೀಡಿದೆ.

ನಟಿ ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಕಿ, ಕಂಗನಾಗೆ ಕೋವಿಡ್​ ರೋಗ ಲಕ್ಷಣಗಳು ಇವೆ .ಹೀಗಾಗಿ ಆಕೆಗೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎಂದು ಕೋರ್ಟ್​ಗೆ ಹೇಳಿದರು.

ಕಂಗನಾರಿಗೆ ಕೋವಿಡ್ ಪರೀಕ್ಷೆ ನಡೆಸಿ ವರದಿ ಪಾಸಿಟಿವ್​ ಬಂದಲ್ಲಿ ಅದನ್ನು ಕೋರ್ಟ್​ಗೆ ಸಲ್ಲಿಸುವುದಾಗಿ ಸಿದ್ದಿಕಿ ಹೇಳಿದ್ದಾರೆ. ತಮ್ಮ ಸಿನಿಮಾ ಪ್ರಚಾರಕ್ಕಾಗಿ ಕಂಗನಾ ಒಂದಿಲ್ಲೊಂದು ಕಡೆಗೆ ಪ್ರಯಾಣ ಬೆಳೆಸುತ್ತಲೇ ಇದ್ದಾರೆ. ಇದೇ ಕಾರಣದಿಂದಾಗಿ ಅವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಸಿದ್ದಿಕಿ ಹೇಳಿದ್ದಾರೆ.

ಜಾವೇದ್​ ಅಖ್ತರ್​ ಪರ ವಕೀಲರು, ಕಂಗನಾ ನ್ಯಾಯಾಲಯದ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದು ವಾದ ಮಂಡಿಸಿದರು. ರಣಾವತ್​ ಬೇಕೆಂತಲೇ ಕಲಾಪವನ್ನು ವಿಳಂಬ ಮಾಡುತ್ತಿದ್ದಾರೆ. ಪ್ರಕರಣವನ್ನು ವಿಳಂಬ ಮಾಡಲೆಂದೇ ರಚಿಸಲಾದ ಉದ್ದೇಶಿತ ತಂತ್ರ ಇದಾಗಿದೆ. ಈ ಮೂಲಕ ಕಂಗನಾ ನ್ಯಾಯಾಂಗ ವ್ಯವಸ್ಥೆಗೆ ಅಗೌರವ ತೋರುತ್ತಿದ್ದಾರೆ ಎಂದು ಹೇಳಿದ್ರು.

ಮುಂದಿನ ವಿಚಾರಣೆಯ ದಿನಾಂಕ ಸೆಪ್ಟೆಂಬರ್​ 20ಕ್ಕೆ ನಿಗದಿಯಾಗಿದೆ. ಅಲ್ಲದೇ ಈ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಕಂಗನಾಗೆ ಸೂಚನೆಯನ್ನೂ ನೀಡಿದೆ. ಕೊರೊನಾ ವೈರಸ್​ ಸೋಂಕು ತಗುಲದೇ ಹೋದಲ್ಲಿ ಕಂಗನಾ ಮುಂದಿನ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಕಂಗನಾ ಪರ ವಕೀಲ ಸಿದ್ಧಕಿ ಕೋರ್ಟ್​ಗೆ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...