alex Certify ಸಾಲ ಮನ್ನಾ ಸ್ಮರಿಸಿ ಹೆಚ್.ಡಿ. ಕುಮಾರಸ್ವಾಮಿಗೆ 25,000 ರೂ. ಚೆಕ್ ನೀಡಿದ ರೈತ: ಇಂಥವರಿಂದ ಪಕ್ಷಕ್ಕೆ ಬಲ ಎಂದ್ರು ಮಾಜಿ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲ ಮನ್ನಾ ಸ್ಮರಿಸಿ ಹೆಚ್.ಡಿ. ಕುಮಾರಸ್ವಾಮಿಗೆ 25,000 ರೂ. ಚೆಕ್ ನೀಡಿದ ರೈತ: ಇಂಥವರಿಂದ ಪಕ್ಷಕ್ಕೆ ಬಲ ಎಂದ್ರು ಮಾಜಿ ಸಿಎಂ

ಚಿಕ್ಕಬಳ್ಳಾಪುರ: ಸಾಲ ಮನ್ನಾ ಮಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ರೈತರೊಬ್ಬರು 25,000 ರೂ. ಚೆಕ್ ನೀಡಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಾಲ ಮಾಡಿದ್ದನ್ನು ಸ್ಮರಿಸಿ 25,000 ರೂ. ಚೆಕ್ ನೀಡಲಾಗಿದೆ. ಚಿಂತಾಮಣಿ ತಾಲೂಕಿನ ದೊಡ್ಡಗಂಜೂರು ಗ್ರಾಮದ ನಾರಾಯಣ ಸ್ವಾಮಿ ಅವರ ಪುತ್ರ ಚಂದ್ರಶೇಖರ್ ಅವರಿಗೆ ಎರಡು ಲಕ್ಷ ರೂಪಾಯಿ ಸಾಲ ಮನ್ನಾ ಆಗಿತ್ತು.

ಈ ಹಿನ್ನೆಲೆಯಲ್ಲಿ ಅವರು ಕುಮಾರಸ್ವಾಮಿ ಅವರ ರೈತರ ಹೋರಾಟ ಯಶಸ್ವಿಯಾಗಲಿ ಎಂದು ಹಾರೈಸಿ, ಕಿರು ಸಹಾಯವಾಗಿ ಅವರು 25,000 ರೂ. ಚೆಕ್ ನೀಡಿದ್ದಾರೆ. ಚೆಕ್ ಸ್ವೀಕರಿಸಿದ ಕುಮಾರಸ್ವಾಮಿ, ಇಂಥವರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...