alex Certify ಪ್ರಾಣಿ ಹಿಂಸೆ ಹಿನ್ನೆಲೆ ಕಂಬಳಕ್ಕೆ ಬೆಂಬಲ ಬೇಡ: ಜೈನ ಸ್ವಾಮೀಜಿ ಕರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣಿ ಹಿಂಸೆ ಹಿನ್ನೆಲೆ ಕಂಬಳಕ್ಕೆ ಬೆಂಬಲ ಬೇಡ: ಜೈನ ಸ್ವಾಮೀಜಿ ಕರೆ

ಉಡುಪಿ: ಪ್ರಾಣಿ ಹಿಂಸೆ ಇರುವ ಕಂಬಳಕ್ಕೆ ಜೈನ ಸಮುದಾಯ ಬೆಂಬಲ ನೀಡಬಾರದು ಎಂದು ಜೈನ ಸ್ವಾಮೀಜಿ ಹೇಳಿದ್ದಾರೆ.

ಕಾರ್ಕಳ ಕೆರೆ ಬಸದಿಯ ಪಂಚಕಲ್ಯಾಣ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ 108 ಮುನಿಶ್ರೀ ಅಮೋಘ ಕೀರ್ತಿ ಮಹಾರಾಜ್ ಅವರು, ಅಹಿಂಸೆ, ಕರುಣೆ ಬಗ್ಗೆ ಪ್ರತಿಪಾದಿಸುವ ಜೈನ ಸಮುದಾಯ ಪ್ರಾಣಿ, ಪಕ್ಷಿಗಳಿಗೆ ಹಿಂಸೆ ನೀಡುವುದನ್ನು ಬೆಂಬಲಿಸಬಾರದು. ಈ ಹಿನ್ನೆಲೆಯಲ್ಲಿ ಜೈನ ಸಮುದಾಯ ಕಂಬಳಕ್ಕೆ ಬೆಂಬಲ ನೀಡಬಾರದು ಎಂದು ಹೇಳಿದ್ದಾರೆ.

ಕಂಬಳ ಕಂಡರೆ ನಮಗೆ ದುಃಖವಾಗುತ್ತದೆ. ಜೈನರು ಕಂಬಳದಲ್ಲಿ ಭಾಗವಹಿಸಬಾರದು. ಕಂಬಳ ಬೆಂಬಲಿಸುವವರು ಪಾರ್ಶ್ವನಾಥ, ಮಹಾವೀರ, ಜೈನ ಧರ್ಮದ ಅನುಯಾಯಿಗಳು ಆಗಲಾರರು. ಬದುಕಲು ಬಿಡಿ ಎನ್ನುವುದನ್ನು ಜೈನ ಧರ್ಮ ಸಾರುತ್ತದೆ ಎಂದು ಸ್ವಾಮೀಜಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...