alex Certify ರಬ್ಬರ್ ಬ್ಯಾಂಡ್ ನಿಂದ ಕಲ್ಲಂಗಡಿ ಹಣ್ಣು ಸ್ಫೋಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಬ್ಬರ್ ಬ್ಯಾಂಡ್ ನಿಂದ ಕಲ್ಲಂಗಡಿ ಹಣ್ಣು ಸ್ಫೋಟ…!

ತೇನೆಸೀ: ಜೇರಿಮಿಯ ವರ್ಲಿಕ್ ಎಂಬಾತ ವಿಚಿತ್ರ ಹವ್ಯಾಸದ ಮೂಲಕ‌ ಲಾಕ್ ಡೌನ್ ನಲ್ಲಿ ಜನರನ್ನು ರಂಜಿಸುತ್ತಿದ್ದಾನೆ.

ಹಣ್ಣು, ತರಕಾರಿಗಳಿಗೆ ರಬ್ಬರ್ ಬ್ಯಾಂಡ್ ಗಳನ್ನು ಒಂದಾದ ಮೇಲೊಂದು ಹಾಕುತ್ತಾ ಹೋಗುತ್ತಾನೆ. ಹಾಗೆ ಒಂದಿಷ್ಟು ರಬ್ಬರ್ ಬ್ಯಾಂಡ್ ಗಳನ್ನು ಹಾಕಿದ ಮೇಲೆ ಒತ್ತಡಕ್ಕೆ ಸಿಲುಕಿ ಹಣ್ಣು ಒಡೆದು ಹೋಗುತ್ತವೆ. ಹೀಗೆ ಹಲವಾರು ಹಣ್ಣು ಮತ್ತು ತರಕಾರಿಗಳ ಮೇಲೆ ಪ್ರಯೋಗ ಮಾಡಿ ಈಗ ಕಲ್ಲಂಗಡಿ ಹಣ್ಣಿಗೆ ಇದೆ ರೀತಿ ಒತ್ತಡ ಹಾಕಿ ಅದು ಒಡೆದು ಎರಡು ಭಾಗವಾಗುವ ವಿಡಿಯೋ ವನ್ನ ಮಾಡಿ ತನ್ನ ಇನ್ಸ್ಟಾಗ್ರಾಂ‌ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೋ 4 ಲಕ್ಷ ವೀಕ್ಷಣೆಯನ್ನು ಪಡೆದಿದೆ.

ನೀನೊಬ್ಬ ಕಲಾಕಾರ ಎಂದು ಒಬ್ಬ ಕಮೆಂಟ್ ಮಾಡಿದರೆ, ನಾವು ನೀನು ಹಣ್ಣು ಸ್ಫೋಟಗೊಂಡ ನಂತರ ಮನೆಯನ್ನು ಹೇಗೆ ಸ್ವಚ್ಚಗೊಳಿಸುವೆ ಎಂದು ನೋಡಲು ಬಯಸುತ್ತೇವೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...