alex Certify ಪಾಕಿಸ್ತಾನದಲ್ಲಿ ಹಿಂದೂ ಪತ್ರಕರ್ತನ ಬರ್ಬರ ಹತ್ಯೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದಲ್ಲಿ ಹಿಂದೂ ಪತ್ರಕರ್ತನ ಬರ್ಬರ ಹತ್ಯೆ….!

31 ವರ್ಷದ ಹಿಂದೂ ಪತ್ರಕರ್ತನನ್ನ ಪಾಕಿಸ್ತಾನದಲ್ಲಿ ಹತ್ಯೆಗೈಯಲಾಗಿದೆ. ಸಿಂದ್​ ಪ್ರಾಂತ್ಯದಲ್ಲಿ ಕ್ಷೌರ ಮಾಡಿಸಿಕೊಳ್ತಿದ್ದ ವೇಳೆ ಆಕ್ರಮಣಕಾರರ ಗುಂಪೊಂದು ಪತ್ರಕರ್ತನ ಮೇಲೆ ಗುಂಡು ಹಾರಿಸಿದೆ.

ಉರ್ದು ಭಾಷೆಯ ಪತ್ರಿಕೆ ಪುಚಾನೋ ಹಾಗೂ ಸ್ಥಳೀಯ ಟಿವಿ ಚಾನೆಲ್​ ಒಂದರ ವರದಿಗಾರನಾಗಿದ್ದ ಅಜಯ್​ ಲಾಲ್ವಾನಿ ಎಂಬವರನ್ನ ಕೊಲೆ ಮಾಡಲಾಗಿದೆ.

ಕ್ಷೌರಿಕನ ಅಂಗಡಿಯಲ್ಲಿ ಅಜಯ್​ ಕುಳಿತುಕೊಂಡಿದ್ದ ವೇಳೆ 2 ಬೈಕ್​ ಹಾಗೂ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪು ಈ ಕೃತ್ಯ ಎಸಗಿದೆ.

ಈ ಕೃತ್ಯ ನಡೆಯುತ್ತಿದ್ದಂತೆಯೇ ಅಜಯ್​ರನ್ನ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತಾದರೂ ಲಾಲ್ವಾನಿ ಸಾವನ್ನಪ್ಪಿದ್ದಾರೆ. ಲಾಲ್ವಾನಿ ತಂದೆ ತಮ್ಮ ಕುಟುಂಬ ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಮೂವರು ಶಂಕಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...