alex Certify ಮತಾಂತರಗೊಳ್ಳಲು ಒಪ್ಪದ್ದಕ್ಕೆ ಸಹೋದರಿಯ ಗಂಡನ ಮೇಲೆ ಡೆಡ್ಲಿ ಅಟ್ಯಾಕ್​​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತಾಂತರಗೊಳ್ಳಲು ಒಪ್ಪದ್ದಕ್ಕೆ ಸಹೋದರಿಯ ಗಂಡನ ಮೇಲೆ ಡೆಡ್ಲಿ ಅಟ್ಯಾಕ್​​…..!

ಕ್ರಿಶ್ಚಿಯನ್​​ ಧರ್ಮದ ಯುವತಿಯನ್ನು ಮದುವೆಯಾಗಿದ್ದ ದಲಿತ ಯುವಕ ಧರ್ಮ ಬದಲಾಯಿಸಲು ಒಪ್ಪದ ಕಾರಣಕ್ಕೆ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯು ತಿರುವನಂತಪುರಂನ ಅನಥಲವಟ್ಟೋಂನಲ್ಲಿ ನಡೆದಿದೆ. ಮಿಧುನ್ ಕೃಷ್ಣನ್​ ಎಂಬಾತನ ಮೇಲೆ ಆತನ ಪತ್ನಿಯ ಸಹೋದರ ಡ್ಯಾನಿಷ್​​ ಹಲ್ಲೆ ನಡೆಸಿದ್ದಾನೆ.

ದೀಪ್ತಿ ಎಂಬಾಕೆಯನ್ನು ಪ್ರೀತಿಸಿದ್ದ ಮಿಧುನ್​ ಆಕೆಯನ್ನು ಅಕ್ಟೋಬರ್​ 29ರಂದು ದೇವಸ್ಥಾನದಲ್ಲಿ ಮದುವೆಯಾಗಿದ್ದ. ಪೊಲೀಸ್​ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ ದೀಪ್ತಿ ಕುಟುಂಬಸ್ಥರು ಚರ್ಚ್​ನಲ್ಲಿ ಮದುವೆಯಾಗುವಂತೆ ದಂಪತಿಯನ್ನು ಪೀಡಿಸಿದ್ದರು ಎನ್ನಲಾಗಿದೆ. ದೀಪ್ತಿ ಕುಟುಂಬಸ್ಥರು ಕ್ಯಾಥೋಲಿಕ್​ ಪಂಗಡಕ್ಕೆ ಸೇರಿದವರಾಗಿದ್ದಾರೆ.

ಇದಾದ ಬಳಿಕ ದಂಪತಿ ಚರ್ಚ್​ಗೆ ಆಗಮಿಸಿದ್ದರು. ಈ ವೇಳೆ ಡ್ಯಾನಿಷ್​ ಮಿಧುನ್​ ಬಳಿಯಲ್ಲಿ ಕ್ರಿಶ್ಚಿಯನ್​ ಧರ್ಮಕ್ಕೆ ಮತಾಂತರಗೊಳ್ಳುವಂತೆ ಹೇಳಿದ್ದಾನೆ. ಇದಕ್ಕೆ ಮಿಧುನ್​​ ನಿರಾಕರಿಸುತ್ತಿದ್ದಂತೆಯೇ ದೀಪ್ತಿಯನ್ನು ಬಿಡುವಂತೆ ಡ್ಯಾನಿಷ್​ ಹೇಳಿದ್ದಾನೆ. ಅಲ್ಲದೇ ಹಣದ ಆಮೀಷವನ್ನೂ ಒಡ್ಡಲಾಗಿತ್ತು. ಆದರೆ ಈ ಯಾವುದೇ ಆಫರ್​ಗಳನ್ನು ಒಪ್ಪಲು ಮಿಧುನ್​ ತಯಾರಿರಲಿಲ್ಲ. ಇದಾದ ಬಳಿಕ ದಂಪತಿ ದೀಪ್ತಿ ತಾಯಿಯನ್ನು ಭೇಟಿಯಾಗಲು ತೆರಳಿದ್ದ ವೇಳೆ ಡ್ಯಾನಿಷ್​ ಮಿಧುನ್​ ಮೇಲೆ ಹಲ್ಲೆ ನಡೆಸಿದ್ದಾನೆ.

ದೂರು ದಾಖಲಿಸಿರುವ ದೀಪ್ತಿ, ತನ್ನ ಪತಿಯ ಕುತ್ತಿಗೆ, ಬೆನ್ನು ಮೂಳೆ ಹಾಗೂ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದೆ ಎಂದಿದ್ದಾಳೆ. ಮೊದಲು ಪೊಲೀಸರು ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಆದರೆ ಮಾಧ್ಯಮದವರು ಮಧ್ಯ ಪ್ರವೇಶಿಸಿದ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡರು ಎಂದು ದೀಪ್ತಿ ಆರೋಪಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...