alex Certify ಸಂಬಂಧಿಕರು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದರೆ ಮಾಹಿತಿ ನೀಡಿ; ಕುತೂಹಲ ಮೂಡಿಸಿದ ಇನ್ಸ್ ಪೆಕ್ಟರ್ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಂಧಿಕರು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದರೆ ಮಾಹಿತಿ ನೀಡಿ; ಕುತೂಹಲ ಮೂಡಿಸಿದ ಇನ್ಸ್ ಪೆಕ್ಟರ್ ಆದೇಶ

UP legislators demanded High Court judges be arrested: This 1964 case was once a national landmark

ಹುಬ್ಬಳ್ಳಿ; ಹುಬ್ಬಳ್ಳಿ ದಕ್ಷಿಣ ಸಂಚಾರಿ ಠಾಣೆಯ ಇನ್ಸ್ ಪೆಕ್ಟರ್ ಮಹಾಂತೇಶ್ ಹೊಸಪೇಟೆ ಹೊರಡಿಸಿದ ಆದೇಶವೊಂದು ಕುತೂಹಲಕ್ಕೆ ಕಾರಣವಾಗಿದೆ. ಸ್ವತ: ಠಾಣೆಯ ಸಿಬ್ಬಂದಿಗಳ ನಿದ್ದೆಗೆಡಿಸಿದೆ.

ಠಾಣೆಯ ಎಲ್ಲಾ ಸಿಬ್ಬಂದಿ ತಮ್ಮ ಹಾಗೂ ಪತ್ನಿ ಕುಟುಂಬದ ಯಾರಾದರೂ ಸಂಬಂಧಿಕರು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದರೆ ಅದು ಪತ್ರಿಕೆಗಳೇ ಆಗಿರಲಿ ಅಥವಾ ಟಿವಿ ಮಾಧ್ಯಮಗಳೇ ಆಗಿರಲಿ. ಆ ಬಗ್ಗೆ ಠಾಣೆಗೆ ಬಂದು ಖುದ್ದು ಮಾಹಿತಿ ನೀಡುವಂತೆ ಆದೇಶ ಹೊರಡಿಸಿದ್ದಾರೆ.

ಆದೇಶ ಪ್ರತಿ ನೋಡುತ್ತಿದ್ದಂತೆ ಠಾಣೆಯ ಸಿಬ್ಬಂದಿಗಳು ಶಾಕ್ ಆಗಿದ್ದು, ಇದಕ್ಕೆ ಕಾರಣವೇನಿರಬಹುದು ಎಂದು ತಲೆಕೆಡಿಸಿಕೊಂಡಿದ್ದಾರೆ.

ದಕ್ಷಿಣ ಸಂಚಾರಿ ಠಾಣೆಯ ಪ್ರತಿಯೊಂದು ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗುತ್ತಿದ್ದು, ಇದನ್ನು ಸೋರಿಕೆ ಮಾಡುತ್ತಿರುವವರು ಯಾರು? ಎನ್ನುವುದನ್ನು ಪತ್ತೆ ಹಚ್ಚಲೆಂದು ಇಂತದ್ದೊಂದು ಆದೇಶವನ್ನು ಹೊರಡಿಸಲಾಗಿದೆಯೇ ಎಂಬ ಅನುಮಾನ ಆರಂಭವಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...