alex Certify ತಮ್ಮ ಜಮೀನಿನಲ್ಲಿ ಮದ್ಯ ಸೇವಿಸಬೇಡಿ ಎಂದ ನಿವೃತ್ತ ಇನ್ಸ್ ಪೆಕ್ಟರ್ ಕೈ ಕತ್ತರಿಸಿದ ರೌಡಿಗಳ ಗುಂಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮ ಜಮೀನಿನಲ್ಲಿ ಮದ್ಯ ಸೇವಿಸಬೇಡಿ ಎಂದ ನಿವೃತ್ತ ಇನ್ಸ್ ಪೆಕ್ಟರ್ ಕೈ ಕತ್ತರಿಸಿದ ರೌಡಿಗಳ ಗುಂಪು

ರಾಮನಗರ: ತಮ್ಮ ಜಮೀನಿನಲ್ಲಿ ಮದ್ಯ ಸೇವಿಸಬೇಡಿ ಎಂದು ಹೇಳಿದ್ದಕ್ಕೆ ನಿವೃತ್ತ ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ ರೌಡಿಗಳ ಗುಂಪು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೈ ಕತ್ತರಿಸಿದೆ.

ರಾಮನಗರ ಜಿಲ್ಲೆಯ ಬನ್ನಿಕುಪ್ಪೆ ಸಮೀಪ ಘಟನೆ ನಡೆದಿದೆ. 61 ವರ್ಷದ ಕೃಷ್ಣಯ್ಯ ದಾಳಿಗೆ ಒಳಗಾದ ನಿವೃತ್ತ ಪೊಲೀಸ್ ಇನ್ಸ್ ಪೆಕ್ಟರ್. ಶುಕ್ರವಾರ ಸಂಜೆ ಬನ್ನಿಕುಪ್ಪೆ ಸಮೀಪ ಕೃಷ್ಣಯ್ಯ ಅವರ ತೋಟದಲ್ಲಿ ರೌಡಿಗಳ ಗುಂಪು ಮದ್ಯ ಸೇವನೆ ಮಾಡಿ ಬಾಟಲಿಗಳನ್ನು ಎಸೆದಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ಮಾಡಿದ್ದು, ಈ ವೇಳೆ ಕೃಷ್ಣಯ್ಯ ಮಗ ಹಾಗೂ ಸಹೋದರನೊಂದಿಗೆ ಪೊಲೀಸರಿಗೆ ದೂರು ನೀಡಲು ಹೊರಟಿದ್ದಾರೆ,

ಕಾರ್ ನಲ್ಲಿ ಹಿಂಬಾಲಿಸಿದ ನಾಲ್ವರು ಆರೋಪಿಗಳು ಕೃಷ್ಣಯ್ಯ ಅವರನ್ನು ತಡೆದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ತಪ್ಪಿಸಿಕೊಳ್ಳುವಾಗ ಮಚ್ಚು ತಗುಲಿ ಕೈನ ಬಹುತೇಕ ಭಾಗ ಕತ್ತರಿಸಿ ಹೋಗಿದೆ. ಹಲ್ಲೆಕೋರರಿಂದ ಪಾರಾಗಿ ಕೃಷ್ಣಯ್ಯ ಪೊಲೀಸ್ ಠಾಣೆಗೆ ಬಂದಿದ್ದಾರೆ. ಗಾಯಗೊಂಡ ಕೃಷ್ಣಯ್ಯ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿರಣ್, ಮಹದೇವ, ಹನುಮಂತ ಎಂಬುವರು ಕೃತ್ಯವೆಸಸಗಿದ್ದು, ಕಿರಣ್ ನನ್ನು ವಶಕ್ಕೆ ಪಡೆದು ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ. ಮಹದೇವ ಮತ್ತು ಹನುಮಂತ ರೌಡಿಶೀಟರ್ ಗಳಾಗಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...