alex Certify ಕ್ರಿಕೆಟ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್….! ಭಾರತ ಟಿ-20 ತಂಡದಿಂದ ಮತ್ತೊಬ್ಬ ಆಟಗಾರ ಹೊರಕ್ಕೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್….! ಭಾರತ ಟಿ-20 ತಂಡದಿಂದ ಮತ್ತೊಬ್ಬ ಆಟಗಾರ ಹೊರಕ್ಕೆ….?

ಭಾರತ-ಶ್ರೀಲಂಕಾ ಮಧ್ಯೆ ಮೂರನೇ ಹಾಗೂ ಕೊನೆಯ ಟಿ-20 ಪಂದ್ಯ ಇಂದು ನಡೆಯಲಿದೆ. ಮೊದಲ ಪಂದ್ಯವನ್ನು ಗೆದ್ದಿದ್ದ ಭಾರತಕ್ಕೆ ಕೊರೊನಾ ಅಡ್ಡಿಯಾಯ್ತು. ಎರಡನೇ ಪಂದ್ಯಕ್ಕೆ ಭಾರತದ 9 ಆಟಗಾರರು ಅಲಭ್ಯರಾಗಿದ್ದರು. ಹೊಸ ಪಡೆ ಜೊತೆ ಹೋರಾಟ ಶುರು ಮಾಡಿದ ಭಾರತಕ್ಕೆ ಎರಡನೇ ಪಂದ್ಯದಲ್ಲಿ ಸೋಲು ಸಿಕ್ಕಿತ್ತು. ಇಂದು ರಾತ್ರಿ 8 ಗಂಟೆಗೆ ಕೊನೆ ಪಂದ್ಯ ನಡೆಯಲಿದೆ.

ಈ ಮಧ್ಯೆ ಮತ್ತೊಂದು ನಿರಾಶೆ ಸುದ್ದಿ ಹೊರ ಬಿದ್ದಿದೆ. ಟೀಂ ಇಂಡಿಯಾದಿಂದ ಇನ್ನೊಬ್ಬ ಆಟಗಾರ ಹೊರಗುಳಿಯಲಿದ್ದಾರೆ. ವೇಗದ ಬೌಲರ್ ನವದೀಪ್ ಸೈನಿ ಎರಡನೇ ಟಿ 20 ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದಾರೆ. ನವದೀಪ್ ಸೈನಿ ಭುಜದ ಗಾಯದಿಂದ ಬಳಲುತ್ತಿದ್ದಾರೆ. ಎರಡನೇ ಪಂದ್ಯದಲ್ಲಿ ನವದೀಪ್ ಬೌಲಿಂಗ್ ಮಾಡಿಲ್ಲ.

ಭಾರತ ತಂಡದ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ, ನವದೀಪ್ ಸೈನಿಯ ಆರೋಗ್ಯದ ಬಗ್ಗೆ ನಿಗಾ ಇಡಲಾಗುತ್ತಿದೆ ಎಂದಿದ್ದಾರೆ. ನವದೀಪ್ ಸೈನಿ, ಮೂರನೇ ಪಂದ್ಯದಲ್ಲಿ ಆಡುವುದು ಕಷ್ಟ ಎನ್ನಲಾಗ್ತಿದೆ. ಗಾಯಗೊಂಡ ತಕ್ಷಣ ಸೈನಿಯನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಗಿತ್ತು. ಒಂದು ವೇಳೆ ಸೈನಿ ಹೊರಬಿದ್ದರೆ, ಟಿ-20 ತಂಡದಿಂದ ಹೊರಬಿದ್ದ 10ನೇ ಆಟಗಾರನಾಗಲಿದ್ದಾರೆ ಸೈನಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...