alex Certify ಅತ್ತಿಗೆ ರೂಮ್ ಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ಮೈದುನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ತಿಗೆ ರೂಮ್ ಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ಮೈದುನ

ಲಖ್ನೋ: ಅತ್ತಿಗೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮೈದುನ ಅಣ್ಣನಿಂದಲೇ ಕೊಲೆಯಾಗಿದ್ದಾನೆ. ಉತ್ತರ ಪ್ರದೇಶದ ಆಗ್ರಾ ಸಮೀಪದ ಎತ್ಮಾ ಉದ್ಧೌಲ್ ಸುಶೀಲ್ ನಗರದಲ್ಲಿ ಘಟನೆ ನಡೆದಿದೆ.

ಸಂಜಯ್ ಮೃತಪಟ್ಟ ವ್ಯಕ್ತಿ. ಹಿರಿಯ ಸಹೋದರ ಸುರೇಂದ್ರ ಸಿಂಗ್ ಕೊಲೆ ಆರೋಪಿಯಾಗಿದ್ದಾನೆ. ಸುಶೀಲ್ ನಗರ ನಿವಾಸಿಯಾಗಿರುವ ರಮೇಶ್ ಚಂದ್ ಅವರ ಐವರು ಮಕ್ಕಳಲ್ಲಿ ಸುರೇಂದ್ರ ಸಿಂಗ್ ಮೊದಲನೆಯವನಾಗಿದ್ದು, ಸಂಜಯ್ ಎರಡನೆಯವನಾಗಿದ್ದಾನೆ. ಎಲ್ಲರಿಗೂ ಮದುವೆಯಾಗಿದ್ದು ಸಂಜಯ್ ಗೆ ಮಾತ್ರ ಮದುವೆಯಾಗಿರಲಿಲ್ಲ. ಸಹೋದರರೆಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದು ಸಂಜಯ್ ಆಗಾಗ ಅಣ್ಣ-ತಮ್ಮಂದಿರ ಪತ್ನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ.

ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ ಸಂಜಯ್ ಅತ್ತಿಗೆಯರ ರೂಮ್ ಗೆ ನುಗ್ಗಿ ಅನುಚಿತ ವರ್ತನೆ ತೋರುತ್ತಿದ್ದ. ಇದೇ ರೀತಿ ಸುರೇಂದ್ರ ಸಿಂಗ್ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಇದರಿಂದ ಆಕ್ರೋಶಗೊಂಡ ಸುರೇಂದ್ರ ಸಿಂಗ್ ಬಡಿಗೆಯಿಂದ ಥಳಿಸಿ ತಮ್ಮನನ್ನು ಕೊಲೆ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...