alex Certify ತವರಿಗೆ ತೆರಳುತ್ತಿರುವ ಪ್ರಯಾಣಿಕರಿಗೆ ಹಾಡಿನ ಮೂಲಕ ಬೀಳ್ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತವರಿಗೆ ತೆರಳುತ್ತಿರುವ ಪ್ರಯಾಣಿಕರಿಗೆ ಹಾಡಿನ ಮೂಲಕ ಬೀಳ್ಕೊಡುಗೆ

ಜಮ್ಮು: ಸುದೀರ್ಘ ಲಾಕ್ ಡೌನ್‌ ನಂತರದ ಇಲ್ಲಿನ ತವಿ ರೈಲ್ವೆ ನಿಲ್ದಾಣದಿಂದ ಊರಿಗೆ ಹೊರಟವರನ್ನು ಪೊಲೀಸ್ ಸಿಬ್ಬಂದಿಯೊಬ್ಬರು ಹಾಡು ಹೇಳಿ ಬೀಳ್ಕೊಟ್ಟಿದ್ದಾರೆ.

ನಿಲ್ದಾಣದ ಎದುರು ನಿಂತು ಗಿಟಾರ್ ಬಾರಿಸುತ್ತ “ಗುಲಾಬಿ ಆಂಕೆ” ಎಂದು ಹಾಡು ಹೇಳುತ್ತಿರುವ ಪೊಲೀಸ್ ಸಿಬ್ಬಂದಿಯ ವಿಡಿಯೋವನ್ನು ಜಮ್ಮು ಕಾಶ್ಮೀರ ಪೊಲೀಸ್ ನ ಮುಖೇಶ್ ಸಿಂಗ್ ಎಂಬುವವರು”ಎಸ್ಡಿಪಿಒ ಈಸ್ಟ್ ರೈಲ್ವೆ ಸ್ಟೇಶನ್,
ಮೊದಲ ರೈಲಿನ ಪ್ರಯಾಣಿಕರಿಗೆ ಹಾಡು ಹೇಳುತ್ತಿರುವ ಸಿಬ್ಬಂದಿ” ಎಂಬ ಕ್ಯಾಪ್ಶನ್ ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಅದಕ್ಕೆ ಸಾಕಷ್ಟು ಲೈಕ್, ಕಮೆಂಟ್ ಗಳು ಬಂದಿವೆ. “ನೀನು ಸ್ಟಾರ್ ಆಗಬಲ್ಲೆ” ಎಂದು ಹಲವರು ಹುರಿದುಂಬಿಸಿದ್ದಾರೆ.
ಕೊರೊನಾ ಸಂಕಷ್ಟ ಕಾಲದಲ್ಲಿ ಪೊಲೀಸರು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಮಾಡುವ ಎಲ್ಲ ಕ್ರಿಯಾಶೀಲ ಕಾರ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಒಳಗಾಗುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...