alex Certify ಸಾಲ ಪಡೆಯಲು ಅರ್ಜಿ ಸಲ್ಲಿಸಿದವನಿಗೆ ಕಾದಿತ್ತು ಶಾಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲ ಪಡೆಯಲು ಅರ್ಜಿ ಸಲ್ಲಿಸಿದವನಿಗೆ ಕಾದಿತ್ತು ಶಾಕ್…!

ಕೊರೋನಾ ಲಾಕ್ ‌ಡೌನ್ ಸಮಯದಲ್ಲಿ ದೈನಂದಿನ ಜೀವನ ನಡೆಸುವುದೂ ತ್ರಾಸದಾಯಕವಾದ ಮೇಲೆ ಬ್ಯಾಂಕೊಂದಕ್ಕೆ ಸಣ್ಣ ಲೋನ್ ಕೋರಿ ಅರ್ಜಿ ಸಲ್ಲಿಸಿದ್ದ ಹರಿಯಾಣದ ಕುರುಕ್ಷೇತ್ರದ ಚಹಾ ವ್ಯಾಪಾರಿಗೆ ದೊಡ್ಡ ಶಾಕ್ ಒಂದು ಕಾದಿದೆ.

ರಾಜ್‌ಕುಮಾರ್‌ ಹೆಸರಿನ ಈ ಪುಟ್ಟ ವ್ಯಾಪಾರಿ ಸಲ್ಲಿಸಿದ್ದ ಲೋನ್ ಅರ್ಜಿಯನ್ನು ತಿರಸ್ಕರಿಸಿದ ಬ್ಯಾಂಕ್, ಅವರಿಗೆ 50 ಕೋಟಿ ರೂ.ಗಳ ಸಾಲ ಮರುಪಾವತಿಯ ನೊಟೀಸ್ ಕಳುಹಿಸಿದೆ. ಆದರೆ, ಈತ ಯಾವುದೇ ಸಾಲವನ್ನೂ ಸಹ ಬ್ಯಾಂಕಿನಿಂದ ಪಡೆದುಕೊಂಡಿಲ್ಲ.

ಈ ಹಿಂದೆ ಎಂದೂ ಸಹ ಸಾಲಕ್ಕೆ ಅರ್ಜಿ ಸಲ್ಲಿಸದ ತನಗೆ ಅದು ಹೇಗೆ ಈ ರೀತಿಯ ಸಾಲ ಮರುಪಾವತಿ ನೊಟೀಸ್ ಬಂದಿದೆ ಎಂದು ಅಚ್ಚರಿಗೀಡಾಗಿದ್ದಾರೆ ರಾಜ್‌ಕುಮಾರ್‌. ಮತ್ತೊಬ್ಬರ ಹೆಸರಿನಲ್ಲಿ ಸಾಲ ಪಡೆದು ವಂಚಿಸುವ ಜಾಲವೊಂದಕ್ಕೆ ರಾಜ್‌ಕುಮಾರ್‌ ಸಿಕ್ಕಿಹಾಕಿಕೊಂಡಿರಬಹುದು ಎಂದು ಟ್ವಿಟ್ಟಿಗರೊಬ್ಬರು ಕಾಮೆಂಟ್ ಹಾಕಿದ್ದಾರೆ.

— ANI (@ANI) July 22, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...