ಸಾಲ ಪಡೆಯಲು ಅರ್ಜಿ ಸಲ್ಲಿಸಿದವನಿಗೆ ಕಾದಿತ್ತು ಶಾಕ್…! 24-07-2020 2:04PM IST / No Comments / Posted In: Latest News, India ಕೊರೋನಾ ಲಾಕ್ ಡೌನ್ ಸಮಯದಲ್ಲಿ ದೈನಂದಿನ ಜೀವನ ನಡೆಸುವುದೂ ತ್ರಾಸದಾಯಕವಾದ ಮೇಲೆ ಬ್ಯಾಂಕೊಂದಕ್ಕೆ ಸಣ್ಣ ಲೋನ್ ಕೋರಿ ಅರ್ಜಿ ಸಲ್ಲಿಸಿದ್ದ ಹರಿಯಾಣದ ಕುರುಕ್ಷೇತ್ರದ ಚಹಾ ವ್ಯಾಪಾರಿಗೆ ದೊಡ್ಡ ಶಾಕ್ ಒಂದು ಕಾದಿದೆ. ರಾಜ್ಕುಮಾರ್ ಹೆಸರಿನ ಈ ಪುಟ್ಟ ವ್ಯಾಪಾರಿ ಸಲ್ಲಿಸಿದ್ದ ಲೋನ್ ಅರ್ಜಿಯನ್ನು ತಿರಸ್ಕರಿಸಿದ ಬ್ಯಾಂಕ್, ಅವರಿಗೆ 50 ಕೋಟಿ ರೂ.ಗಳ ಸಾಲ ಮರುಪಾವತಿಯ ನೊಟೀಸ್ ಕಳುಹಿಸಿದೆ. ಆದರೆ, ಈತ ಯಾವುದೇ ಸಾಲವನ್ನೂ ಸಹ ಬ್ಯಾಂಕಿನಿಂದ ಪಡೆದುಕೊಂಡಿಲ್ಲ. ಈ ಹಿಂದೆ ಎಂದೂ ಸಹ ಸಾಲಕ್ಕೆ ಅರ್ಜಿ ಸಲ್ಲಿಸದ ತನಗೆ ಅದು ಹೇಗೆ ಈ ರೀತಿಯ ಸಾಲ ಮರುಪಾವತಿ ನೊಟೀಸ್ ಬಂದಿದೆ ಎಂದು ಅಚ್ಚರಿಗೀಡಾಗಿದ್ದಾರೆ ರಾಜ್ಕುಮಾರ್. ಮತ್ತೊಬ್ಬರ ಹೆಸರಿನಲ್ಲಿ ಸಾಲ ಪಡೆದು ವಂಚಿಸುವ ಜಾಲವೊಂದಕ್ಕೆ ರಾಜ್ಕುಮಾರ್ ಸಿಕ್ಕಿಹಾಕಿಕೊಂಡಿರಬಹುದು ಎಂದು ಟ್ವಿಟ್ಟಿಗರೊಬ್ಬರು ಕಾಮೆಂಟ್ ಹಾಕಿದ್ದಾರೆ. Haryana: Rajkumar, a tea seller in Kurukshetra claims he owes Rs50 crores to banks without even taking a loan. Says, "I had applied for a loan as my financial situation is dire due to COVID. Bank rejected it saying I already have debt of Rs 50 cr, don't know how it is possible." pic.twitter.com/BhTStsIwiy — ANI (@ANI) July 22, 2020