alex Certify ಪ್ರಧಾನಿ ಮೋದಿ ಶ್ಲಾಘನೆ ಬಳಿಕ ಈ ವ್ಯಕ್ತಿಗೆ ಹರಿದುಬಂದಿದೆ ಕೊಡುಗೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಶ್ಲಾಘನೆ ಬಳಿಕ ಈ ವ್ಯಕ್ತಿಗೆ ಹರಿದುಬಂದಿದೆ ಕೊಡುಗೆಗಳ ಮಹಾಪೂರ

ನದಿ ನೀರನ್ನ ಸ್ವಚ್ಛಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೇರಳ ಮೂಲಕ ದಿವ್ಯಾಂಗ ವ್ಯಕ್ತಿಯ ಪರಿಸರ ಕಾಳಜಿಯನ್ನು ಸ್ವತಃ ಪ್ರಧಾನಿ ಮೋದಿಯವರು ಕೊಂಡಾಡಿದ ಬಳಿಕ ಅವರಿಗೆ ಸಾಲು ಸಾಲು ಉಡುಗೊರೆಗಳು ಹುಡುಕಿಕೊಂಡು ಬರುತ್ತಿವೆ.

ʼಮನ್​ ಕಿ ಬಾತ್ʼ​​ ಕಾರ್ಯಕ್ರಮದ ವೇಳೆ ಕೊಟ್ಟಾಯಂ ಎನ್​.ಎಸ್​. ರಾಜಪ್ಪನ್​ ಅವರ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಕೇರಳದಿಂದ ಬರುವ ಅನೇಕ ಸುದ್ದಿಗಳು ನಮಗೆ ಸಮಾಜದ ಬಗೆಗಿನ ಕಾಳಜಿಯನ್ನ ಹೆಚ್ಚಾಗುವಂತೆ ಮಾಡುತ್ತದೆ. ಕೇರಳದ ಕೊಟ್ಟಾಯಂನ ದಿವ್ಯಾಂಗ ವೃದ್ಧ ಎನ್​.ಎಸ್​. ರಾಜನ್​, ಪಾರ್ಶ್ವವಾಯುವಿನಿಂದ ಸರಿಯಾಗಿ ನಡೆಯಲು ಸಾಧ್ಯವಾಗದೇ ಇದ್ದರೂ ಸಹ, ಇವರ ಪರಿಸರ ಕಾಳಜಿ ಪಾತ್ರ ಕಡಿಮೆಯಾಗಿಲ್ಲ ಎಂದು ಹೇಳಿದ್ರು.

ಕಳೆದ ಅನೇಕ ವರ್ಷಗಳಿಂದ ವೆಂಬಾನಾದ್​ ನದಿಯಲ್ಲಿ ದೋಣಿ ವಿಹಾರ ನಡೆಸುವ ರಾಜಪ್ಪನ್​ ಎಲ್ಲಾ ಪ್ಲಾಸ್ಟಿಕ್​ ಬಾಟಲಿಗಳನ್ನ ನದಿಯಿಂದ ಬೇರ್ಪಡಿಸುತ್ತಾರೆ ಅಂದರೆ ಕಲ್ಪಿಸಿಕೊಳ್ಳಿ, ರಾಜಪ್ಪನ್​ ಯೋಚನಾ ಶಕ್ತಿ ಯಾವ ಮಟ್ಟದಲ್ಲಿದೆ ಎಂದು..! ನಾವು ಕೂಡ ರಾಜಪ್ಪನ್​ರ ಆದರ್ಶಗಳನ್ನ ಮೈಗೂಡಿಸಿಕೊಂಡು ಪರಿಸರದ ಸ್ವಚ್ಛತೆಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕಿದೆ ಎಂದು ಹೇಳಿದ್ರು.

ಹಲವಾರು ವರ್ಷಗಳಿಂದ ರಾಜಪ್ಪನ್​ ಈ ಪರಿಸರ ಕಾಳಜಿ ತೋರಿಸ್ತಾ ಇದ್ದರೂ ಸಹ ಅದು ಸಮಾಜದ ಕಣ್ಣಿಗೆ ಬಿದ್ದಿರಲಿಲ್ಲ. ಆದರೆ ಸ್ಥಳೀಯ ಫೋಟೋಗ್ರಾಫರ್​ ಇಬ್ಬರು ಕಳೆದ ತೆಗೆದ ಫೋಟೋದ ಬಳಿಕ ರಾಜಪ್ಪನ್​ ಕಾರ್ಯ ಎಲ್ಲೆಡೆ ಸುದ್ದಿಯಾಗಿತ್ತು.

ಇದೀಗ ಎನ್​​ಆರ್​ಐ ಉದ್ಯಮಿ ಶ್ರೀಕುಮಾರ್​​​ ಅವರು ದಿವ್ಯಾಂಗ ರಾಜಪ್ಪನ್​​ರ ಪರಿಸರ ಕಾಳಜಿಯನ್ನ ಮೆಚ್ಚಿ ಅವರಿಗೆ ಮೋಟಾರ್​ ದೋಣಿಯನ್ನ ಉಡುಗೊರೆಯಾಗಿ ನೀಡಿದ್ದಾರೆ. ಅದೇ ರೀತಿ ಮತ್ತೊಬ್ಬ ಕೇರಳ ಮೂಲಕ ಕೈಗಾರಿಕೋದ್ಯಮಿ ಬಾಬಿ ಚೆಮ್ಮನೂರ್​ ರಾಜಪ್ಪನ್​ ಹೊಸ ಮನೆಯೊಂದನ್ನ ಕಟ್ಟಿಸಿಕೊಡಲಿದ್ದಾರೆ.  ಇನ್ನು ಈ ವಿಚಾರವಾಗಿ ಮಾತನಾಡಿದ ಚೆಮ್ಮನೂರ್​, ನಾನು ರಾಜಪ್ಪನ್​ ದೋಣಿಯನ್ನ ಕೊಡಿಸೋಣ ಎಂದು ಪ್ಲಾನ್​ ಮಾಡಿದ್ದೆ. ಆದರೆ ಈಗಲೇ ಅವರಿಗೆ ದೋಣಿ ಉಡುಗೊರೆಯಾಗಿ ಬಂದಿದ್ದರಿಂದ ನಾನು ಮನೆಯನ್ನ ಉಡುಗೊರೆಯಾಗಿ ನೀಡುತ್ತಿದ್ದೇನೆ ಎಂದು ಹೇಳಿದ್ರು.

— ANI (@ANI) January 31, 2021

 

 

 

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...