alex Certify ಕಂಗನಾರನ್ನ ಭೇಟಿಯಾಗೋಕೆ ಸಿಗುವ ಸಮಯ ರೈತರನ್ನ ಭೇಟಿಯಾಗೋಕೆ ಸಿಗಲ್ವಾ ಎಂದು ಬಿಜೆಪಿ ವಿರುದ್ಧ ಶರದ್​ ಪವಾರ್​ ಗುಡುಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಗನಾರನ್ನ ಭೇಟಿಯಾಗೋಕೆ ಸಿಗುವ ಸಮಯ ರೈತರನ್ನ ಭೇಟಿಯಾಗೋಕೆ ಸಿಗಲ್ವಾ ಎಂದು ಬಿಜೆಪಿ ವಿರುದ್ಧ ಶರದ್​ ಪವಾರ್​ ಗುಡುಗು

ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​​ ಕಳೆದ ಎರಡು ತಿಂಗಳಿನಿಂದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ನಿಂತಿದ್ದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೊರೆಯುವ ಚಳಿಯ ನಡುವೆಯೂ ಪಂಜಾಬ್​, ಹರಿಯಾಣ ಹಾಗೂ ಉತ್ತರ ಪ್ರದೇಶ ರೈತರು ಕಳೆದ 60 ದಿನಗಳಿಂದ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಒಮ್ಮೆಯಾದರೂ ಸ್ಥಳಕ್ಕೆ ಭೇಟಿ ನೀಡಿ ಅವರನ್ನ ವಿಚಾರಿಸಿದ್ರಾ ? ಈ ರೈತರೇನು ಪಾಕಿಸ್ತಾನಕ್ಕೆ ಸೇರಿದವರಾ..? ಎಂದು ಶರದ್​ ಪವಾರ್ ಗುಡುಗಿದ್ದಾರೆ. ದೆಹಲಿ ಪ್ರತಿಭಟನೆಯನ್ನ ಬೆಂಬಲಿಸಿ ಮುಂಬೈನಲ್ಲಿ ನಡೆಸಲಾದ ರ್ಯಾಲಿಯಲ್ಲಿ ಶರದ್ ಪವಾರ್​ ಭಾಗಿಯಾಗಿದ್ದರು.

ಇದೇ ವೇಳೆ ಮಹಾರಾಷ್ಟ್ರ ರಾಜ್ಯಪಾಲರ ವಿರುದ್ಧವೂ ಹರಿಹಾಯ್ದ ಶರದ್, ಮಹಾರಾಷ್ಟ್ರ ಇಂತಹ ರಾಜ್ಯಪಾಲರನ್ನ ಹಿಂದೆಂದೂ ಕಂಡಿರಲಿಲ್ಲ. ಈ ರಾಜ್ಯಪಾಲರಿಗೆ ಕಂಗನಾ ರಣಾವತ್​ರನ್ನ ಭೇಟಿಯಾಗೋಕೆ ಸಮಯವಿದೆ. ಆದರೆ ರಾಜ್ಯದ ರೈತರನ್ನ ಭೇಟಿ ಮಾಡೋಕೆ ಸಮಯವಿಲ್ಲ. ರೈತರನ್ನ ಭೇಟಿಯಾಗಿ ಅವರ ಕ್ಷೇಮ ವಿಚಾರಿಸೋದು ರಾಜ್ಯಪಾಲರ ಕರ್ತವ್ಯ ಎಂದು ಕಿಡಿಕಾರಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...