alex Certify ʼಕೊರೊನಾʼ ಚುಚ್ಚುಮದ್ದನ್ನು ಮೊದಲು ತೆಗೆದುಕೊಳ್ಳಲಿದ್ದಾರೆ ಈ ಕೇಂದ್ರ ಸಚಿವರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಚುಚ್ಚುಮದ್ದನ್ನು ಮೊದಲು ತೆಗೆದುಕೊಳ್ಳಲಿದ್ದಾರೆ ಈ ಕೇಂದ್ರ ಸಚಿವರು…!

ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆಗಳು ಹಾಗೂ ಈ ಸೋಂಕಿನ ವಿರುದ್ಧ ಹೋರಾಡಲು ಅನ್ವೇಷಿಸುತ್ತಿರುವ ಚುಚ್ಚುಮದ್ದಿನ ಕುರಿತಂತೆ ಅದಾಗಲೇ ಸಾಕಷ್ಟು ಮಂದಿಗೆ ಬಲವಾದ ಅನುಮಾನಗಳು ಹುಟ್ಟಿಕೊಳ್ಳಲಾರಂಭಿಸಿವೆ.

2021ರ ಮೊದಲ ತ್ರೈಮಾಸಿಕದ ವೇಳೆಗೆ ಕೋವಿಡ್-19ಗೆ ಚುಚ್ಚುಮದ್ದು ಕಂಡುಹಿಡಿಯುವುದಾಗಿ ತಿಳಿಸಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್‌ವರ್ಧನ್, ಈ ಬಗ್ಗೆ ಜನರಿಗೆ ಇರುವ ಅನುಮಾನವನ್ನು ಹೋಗಲಾಡಿಸುವ ಯತ್ನ ಮಾಡಿದ್ದಾರೆ. ಜನರಿಗೆ ಈ ಬಗ್ಗೆ ಅನುಮಾನಗಳಿದ್ದಲ್ಲಿ, ಕೋವಿಡ್‌-19 ನಿರೋಧಕ ಮದ್ದನ್ನು ಮೊದಲಿಗೆ ತಾವೇ ತೆಗೆದುಕೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ.

“ಯಾರಿಗೆ ಮದ್ದಿನ ಅಗತ್ಯ ಹೆಚ್ಚಿರುತ್ತದೆಯೋ ಅವರಿಗೆ ಮೊದಲು ಈ ಮದ್ದನ್ನು ಕೊಡಲಾಗುವುದು. ಮದ್ದುಗಳನ್ನು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇಂದ್ರ ಮದ್ದು ನಿಯಂತ್ರಣ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ” ಎಂದು ಸಹ ಹರ್ಷ್‌ವರ್ಧನ್ ಇದೇ ವೇಳೆ ತಿಳಿಸಿದ್ದಾರೆ.

ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆಯು 47,54,356ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿದ್ದರೆ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕ ನಂತರ ಸ್ಥಾನಗಳಲ್ಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...