alex Certify ಶ್ವಾನದ ಹೆಸರು ಹೇಳಿಲ್ಲವೆಂಬ ಕಾರಣಕ್ಕೆ ನಡೀತು ಜಟಾಪಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನದ ಹೆಸರು ಹೇಳಿಲ್ಲವೆಂಬ ಕಾರಣಕ್ಕೆ ನಡೀತು ಜಟಾಪಟಿ…!

ಶ್ವಾನಗಳು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವೇ. ಅದರಲ್ಲೂ ಶ್ವಾನ ನಿಮ್ಮ ಮನೆಯಲ್ಲೇ ಇದೆ ಅಂದ್ರಂತೂ ಪ್ರೀತಿ ಇನ್ನೂ ಜಾಸ್ತಿನೇ ಇರುತ್ತೆ. ಪ್ರೀತಿಯಿಂದ ಸಾಕಿದ ಶ್ವಾನಕ್ಕೆ ಮುದ್ದಾದ ಹೆಸರನ್ನೂ ಇಡೋದುಂಟು. ಆದರೆ ಇದೇ ಶ್ವಾನದ ಹೆಸರಿನ ಕಾರಣಕ್ಕೆ ಇಲ್ಲೊಂದು ಊರಲ್ಲಿ ದೊಡ್ಡ ಗಲಾಟೆಯೇ ನಡೆದು ಹೋಗಿದೆ.

ತನ್ನ ಮುದ್ದಿನ ನಾಯಿಗೆ ಅದರ ಹೆಸರನ್ನ ಹಿಡಿದು ಕರೆಯೋದು ಬಿಟ್ಟು ಶ್ವಾನ ಎಂದು ಹೇಳಿದ್ದಕ್ಕೆ ಕೋಪಗೊಂಡ ನಾಯಿ ಮಾಲೀಕ ತನ್ನ ನೆರೆಮನೆಯ 6 ಮಂದಿಯ ಮೇಲೆ ಹಲ್ಲೆ ನಡೆಸಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

ಶ್ವಾನದ ಕಾಟದಿಂದ ಬೇಸತ್ತಿದ್ದ ಜ್ಯೋತಿ ಪಾರ್ಕ್​ನ ನಿವಾಸಿ ಸುಧೀರ್ ನೆರೆ ಮನೆಯವರ ಬಳಿ ಹೋಗಿ ನಿಮ್ಮ ಶ್ವಾನಕ್ಕೆ ಸರಪಳಿ ಹಾಕಿ ಎಂದು ಮನವಿ ಮಾಡಿದ್ದರು. ಸುಧೀರ್​ ಶ್ವಾನದ ಹೆಸರನ್ನ ಹೇಳೋದನ್ನ ಬಿಟ್ಟು ನಾಯಿ ಎಂದು ಕರೆದಿದ್ದರು. ಇದು ಶ್ವಾನದ ಮಾಲೀಕನ ಕೋಪಕ್ಕೆ ಕಾರಣವಾಗಿತ್ತು.

ಮೆರೈನ್ ಕೋರ್‌ ಸೇರಿದ 53 ವನಿತೆಯರು

ಇದೇ ವಿಚಾರವಾಗಿ ಶುರುವಾದ ವಾದ ಕೊನೆಗೆ ಎರಡು ಕುಟುಂಬಗಳ ನಡುವೆ ಹಲ್ಲೆಯಾಗುವಷ್ಟರ ಮಟ್ಟಿಗೆ ಹೋಗಿದೆ. ಅಲ್ಲೇ ಇನ್ನೊಂದು ಮನೆಯ ಸದಸ್ಯ ಈ ಎಲ್ಲಾ ದೃಶ್ಯವನ್ನ ಮೊಬೈಲ್​ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ. ಈ ವಿಡಿಯೋದಲ್ಲಿ ಶ್ವಾನದ ಮಾಲೀಕ ಸುಧೀರ್​ ಹಾಗೂ ಅವರ ಕುಟುಂಬಸ್ಥರ ಮೇಲೆ ಕೋಲು ಹಾಗೂ ರಾಡುಗಳಿಂದ ಹಲ್ಲೆ ಮಾಡ್ತಿರೋದನ್ನ ನೀವು ನೋಡಬಹುದಾಗಿದೆ.

ಘಟನೆಯಲ್ಲಿ ಸುಧೀರ್ ಕುಟುಂಬಸ್ಥರಿಗೆ ಗಂಭೀರ ಗಾಯಗಳಾಗಿದೆ. ಈ ಸಂಬಂಧ ಸುಧೀರ್​ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...