ಇಡೀ ವಿಶ್ವವನ್ನು ಬೆಚ್ಚಿ ಬೀಳಿಸಿರುವ ಕೊರೊನಾದಿಂದ ಜನರನ್ನು ರಕ್ಷಿಸಲು ಹಗಲಿರುಳು ಎನ್ನದೇ ವೈದ್ಯಲೋಕ ಹೋರಾಡುತ್ತಿದೆ. ಈ ಹೋರಾಟಕ್ಕೆ ಕೆಲವೊಮ್ಮೆ ಸಿಗುವ ಪ್ರತಿಫಲ ಸಂತಸವನ್ನುಂಟು ಮಾಡುತ್ತಿದೆ.
ಕೊರೊನಾದಿಂದ ಬಳಲುತ್ತಿದ್ದ ವೃದ್ಧರೊಬ್ಬರು ಸಂಪೂರ್ಣ ಗುಣಮುಖರಾದ ಬಳಿಕ, ತನಗೆ ಚಿಕಿತ್ಸೆ ನೀಡಿದ ವೈದ್ಯೆಗೆ ತಾನೇ ಬೆಳದ ಅಕ್ಕಿಯನ್ನು ಗಿಫ್ಟ್ ನೀಡಿದ್ದಾರೆ. ಈ ವಿಷಯವನ್ನು ಡಾ. ಊರ್ವಿ ಶುಕ್ಲಾ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
15 ದಿನ ಐಸಿಯುನಲ್ಲಿದ್ದ ವೃದ್ಧರು ಬಳಿಕ ಸಂಪೂರ್ಣ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಳಿಕ ತಮ್ಮ ಹೊಲದಲ್ಲಿ ಬೆಳೆದಿದ್ದ ಭತ್ತವನ್ನು ಅಕ್ಕಿ ಮಾಡಿಸಿ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೆಂಡ್ ಆಗಿದೆ. ಇದು ಕೇವಲ ಗಿಫ್ಟ್ ಅಲ್ಲ, ಇದು ಆಶಿರ್ವಾದ ಎಂದು ನೆಟ್ಟಿಗರು ಹೇಳಿದ್ದಾರೆ.