alex Certify ರಾವಣ ದಹನ ಕಾರ್ಯಕ್ರಮದಲ್ಲಿ ನಡೀತು ಅಗ್ನಿ ಅವಘಡ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾವಣ ದಹನ ಕಾರ್ಯಕ್ರಮದಲ್ಲಿ ನಡೀತು ಅಗ್ನಿ ಅವಘಡ…!

ದೇಶಾದ್ಯಂತ ನವರಾತ್ರಿ ಸಂಭ್ರಮ ಕೊನೆಗೊಂಡಿದೆ. ಪಂಜಾಬ್​​ನಲ್ಲಿ ನವರಾತ್ರಿ ಹಬ್ಬದ ಮುಕ್ತಾಯದ ದಿನದಂದು ರಾವಣನ ದಹನ ಮಾಡುವ ವೇಳೆ ಅಗ್ನಿ ಅವಘಡ ಸಂಭವಿಸಿದೆ.

ಪಂಜಾಬ್​ ರಾಜ್ಯದ ಬಟಾಲಾದ ಶಾಲೆಯೊಂದರ ಮೈದಾನದಲ್ಲಿ ರಾವಣನ ದಹನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯರೆಲ್ಲ ಸೇರಿ ರಾವಣನಿಗೆ ಅಗ್ನಿಸ್ಪರ್ಶ ಮಾಡ್ತಿದ್ದಂತೆ ಅದರೊಳಗಿದ್ದ ಪಟಾಕಿ ಸ್ಫೋಟಗೊಂಡಿದೆ. ಕೂಡಲೇ ಸ್ಥಳದಲ್ಲಿ ನೆರೆದಿದ್ದ ಎಲ್ಲರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅದೃಷ್ಟವಶಾತ್​ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮೂಲಗಳ ಪ್ರಕಾರ ಈ ರಾವಣ ದಹನ ಕಾರ್ಯಕ್ರಮವನ್ನು ಕಾಂಗ್ರೆಸ್​ ಮುಖಂಡ ಹಾಗೂ ಮಾಜಿ ಶಾಸಕ ಅಶ್ವನಿ ಸೇಖ್ರಿ ನೇತೃತ್ವದಲ್ಲಿ ನಡೆಸಲಾಗಿತ್ತು ಅಂತಾ ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...