alex Certify ಕೊರೊನಾ ತಡೆಗೆ ಮಣ್ಣಿನಲ್ಲಿ ಕುಳಿತು ಶಂಖ ಊದಿ ಎಂದ ಬಿಜೆಪಿ ಸಂಸದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ತಡೆಗೆ ಮಣ್ಣಿನಲ್ಲಿ ಕುಳಿತು ಶಂಖ ಊದಿ ಎಂದ ಬಿಜೆಪಿ ಸಂಸದ

Rajasthan BJP MP Recommends Mud Pack and Blowing Conch Shell as ...

ಗಾಂಧಿನಗರ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶದ ರಾಜಕೀಯ ಮುತ್ಸದ್ದಿಗಳು ವಿಚಿತ್ರ ಸಲಹೆಗಳನ್ನು ನೀಡುತ್ತಿದ್ದಾರೆ.‌

ಹಪ್ಪಳದಿಂದ ಹಿಡಿದು ಹಸುವಿನ ಸೆಗಣಿಯವರೆಗೆ ವಿವಿಧ ಸಲಹೆಗಳನ್ನು ಇದುವರೆಗೆ ಕೇಳಿದ್ದೇವೆ.
ಈಗ ರಾಜಸ್ತಾನದ ಬಿಜೆಪಿ ಸಂಸದ ಸುಖಬೀರ ಸಿಂಗ್ ಜೌನಾಪುರಿ ಅವರು ನೀಡಿದ ಸಲಹೆ ಚರ್ಚೆಯಲ್ಲಿದೆ.

ಮಣ್ಣಿನ ಸ್ನಾನ (ಮಡ್ ಪ್ಯಾಕ್) ಹಾಗೂ ಶಂಖ ಊದುವುದರಿಂದ ಕೊರೊನಾದಿಂದ ರಕ್ಷಣೆ ಪಡೆಯಬಹುದು ಎಂದು ಅವರು ಹೇಳಿದ್ದಾರೆ.

ಮಣ್ಣಿನ‌ ರಾಡಿಯಲ್ಲಿ ಕೂತು ಶಂಖ ಊದುವುದರಿ‌ಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎಂದು ಮಧೋಪುರ ಕ್ಷೇತ್ರದ ಎಂಪಿ ತಿಳಿದಿದ್ದಾರೆ.

ಅವರು ಇದೇ ಮೊದಲ ಬಾರಿ ಇಂಥ ವಿಚಿತ್ರ ಸಲಹೆ ನೀಡುತ್ತಿರುವುದಲ್ಲ. ಮೈಗೆ ಮಣ್ಣು ಹಚ್ಚಿಕೊಂಡು ಯೋಗ ಮಾಡುವುದರಿಂದ ರೋಗಗಳು ಗುಣವಾಗುತ್ತವೆ ಎಂದು ಅಂತಾರಾಷ್ಟ್ರೀಯ ಯೋಗ ದಿನದ ದಿವಸ ಹೇಳಿಕೆ ನೀಡಿದ್ದರು.‌

ಹಪ್ಪಳ ತಿನ್ನುವುದರಿಂದ ಕೊರೊನಾ ಬರುವುದಿಲ್ಲ ಎಂದು ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ನದಿ ಪುನರುಜ್ಜೀವನ ಖಾತೆ ರಾಜ್ಯ ಸಚಿವ ಅರ್ಜುನ ರಾಮ್ ಮೇಘವಾಲ್ ಅವರು ಈ ಹಿಂದೆ ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...