alex Certify ದೀಪ್​ ಸಿಧು ಸುಳಿವು ನೀಡಿದವರಿಗೆ ಸಿಗಲಿದೆ 1 ಲಕ್ಷ ನಗದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪ್​ ಸಿಧು ಸುಳಿವು ನೀಡಿದವರಿಗೆ ಸಿಗಲಿದೆ 1 ಲಕ್ಷ ನಗದು

ಗಣರಾಜ್ಯೋತ್ಸವದ ದಿನದಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರ ಸಂಬಂಧ ತನಿಖೆ ಆರಂಭಿಸಿರುವ ದೆಹಲಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಪಂಜಾಬಿ ನಟ, ಸಾಮಾಜಿಕ ಕಾರ್ಯಕರ್ತ ದೀಪ್​ ಸಿಧು ಹಾಗೂ ಇತರರ ವಿರುದ್ಧ ಸರಿಯಾದ ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡೋದಾಗಿ ಘೋಷಿಸಿದ್ದಾರೆ.

ದೀಪ್​ ಸಿಧು ಹಾಗೂ ಇತರೆ ಮೂವರು ಪ್ರಮುಖ ಆರೋಪಿಗಳ ಪತ್ತೆ ಸೂಕ್ತ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ನೀಡೋದಾಗಿ ಹೇಳಿರುವ ದೆಹಲಿ ಪೊಲೀಸರು ಪ್ರಕರಣದ ಇತರೆ ಆರೋಪಿಗಳಾದ ಜಗ್​ಬೀರ್ ಸಿಂಗ್​, ಬೂಟಾ ಸಿಂಗ್​, ಸುಖದೇವ್​ ಸಿಂಗ್​ ಹಾಗೂ ಇಕ್ಬಾಲ್​ ಸಿಂಗ್​​ ವಿರುದ್ಧ ಮಾಹಿತಿ ನೀಡಿದ್ರೆ 50 ಸಾವಿರ ರೂಪಾಯಿ ನಗದು ಬಹುಮಾನ ನೀಡೋದಾಗಿ ಘೋಷಣೆ ಮಾಡಿದ್ದಾರೆ.

ಪ್ರಧಾನಿ ಮೋದಿ ಶ್ಲಾಘನೆ ಬಳಿಕ ಈ ವ್ಯಕ್ತಿಗೆ ಹರಿದುಬಂದಿದೆ ಕೊಡುಗೆಗಳ ಮಹಾಪೂರ

ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್​ ರ್ಯಾಲಿಗೆ ದೆಹಲಿ ಪೊಲೀಸರ ಬಳಿ ಪ್ರತಿಭಟನಾ ನಿರತ ರೈತರು ಅನುಮತಿ ಕೇಳಿದ್ದರು. ಸಾಕಷ್ಟು ಮಾನದಂಡಗಳ ಬಳಿಕ ದೆಹಲಿ ಪೊಲೀಸರು ರ್ಯಾಲಿಗೆ ಅನುಮತಿ ನೀಡಿದ್ದರು. ಆದರೆ ನಿಗದಿತ ಸಮಯಕ್ಕೆ ಮೊದಲೇ ಬಂದ ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ, ಬ್ಯಾರಿಕೇಡ್​ಗಳನ್ನ ಮುರಿದು ಕೆಂಪು ಕೋಟೆಗೆ ನುಗ್ಗಿ ಸಿಖ್​ ಧ್ವಜವನ್ನ ಹಾರಿಸಿದ್ದರು.

ಟ್ರ್ಯಾಕ್ಟರ್​ ರ್ಯಾಲಿಯಲ್ಲಿ ಹಿಂಸಾಚಾರ ನಡೆಸಿದವರಿಂದ ಅಂತರ ಕಾಯ್ದುಕೊಂಡಿರುವ ರೈತ ಮುಖಂಡರು ನಮಗೂ ಹಿಂಸಾಚಾರ ನಡೆಸಿದವರಿಗೂ ಸಂಬಂಧವೇ ಇಲ್ಲ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...