75 ವರ್ಷದ ಪೂಜಾರಿಯನ್ನ ದೇವಸ್ಥಾನದ ಆವರಣದಲ್ಲೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಧಾಕ್ನಗ್ಲಾ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಜಯ ಸಿಂಗ್ ಯಾದವ್ ಸಖಿ ಬಾಬಾ ಎಂದೇ ಸ್ಥಳೀಯ ಪ್ರದೇಶದಲ್ಲಿ ಪ್ರಖ್ಯಾತರಾಗಿದ್ದರು. 45 ವರ್ಷದಿಂದ ದೇಗುಲದಲ್ಲಿ ಪೂಜಾರಿಯಾಗಿದ್ದ ಸಖಿ ಬಾಬಾ ಕಾಳಿ ದೇವಿಯ ಆರಾಧಕನಾದ ಕಾರಂ ಸೀರೆ ಹಾಗೂ ಬಳೆಗಳನ್ನ ಧರಿಸಿಕೊಳ್ಳುತ್ತಿದ್ದರು.
ಕೊಲೆ ಆರೋಪಿ ರಾಮವೀರ್ ಯಾದವ್ ಎಂಬಾತ ಪರಾರಿಯಾಗಿದ್ದು ಆತನ ಪತ್ತೆಗಾಗಿ ಪೊಲೀಸರು ಮೂರು ತಂಡಗಳನ್ನ ರಚಿಸಿಕೊಂಡು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕೊಲೆಗೆ ಇನ್ನೂ ನಿಖರವಾದ ಕಾರಣ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
BIG NEWS: ದೇಶದಲ್ಲಿದೆ ಇನ್ನೂ 1,48,609 ಕೋವಿಡ್ ಸಕ್ರಿಯ ಪ್ರಕರಣ – ಒಂದೇ ದಿನದಲ್ಲಿ 11 ಸಾವಿರಕ್ಕೂ ಅಧಿಕ ಕೇಸ್ ಗಳು ಪತ್ತೆ
ಸಖಿ ಬಾಬಾ ದೇವಸ್ಥಾನದ ಆವರಣದಲ್ಲೇ ಇದ್ದ ಮನೆಯೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ರವಿವಾರ ಬೆಳಗ್ಗೆ ದೇವಸ್ಥಾನಕ್ಕೆ ಬಂದ ಸಖಿ ಬಾಬಾ ಎಂದಿನಂತೆ ಪೂಜಾ ಕಾರ್ಯಗಳನ್ನ ಪೂರೈಸಿದ್ದಾರೆ. ಬಳಿಕ ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಳ್ತಿದ್ದ ವೇಳೆ ರಾಮವೀರ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ವೈಯಕ್ತಿಕ ಕಾರಣದ ಹಿನ್ನೆಲೆ ಸಖಿ ಬಾಬಾನನ್ನ ಸ್ಥಳೀಯ ನಿವಾಸಿ ರಾಮವೀರ್ ಯಾದವ್ ಕೊಲೆ ಮಾಡಿದ್ದಾನೆ. ಈತನ ವಿರುದ್ಧ ಐಪಿಎಸ್ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಕೇಸ್ ದಾಖಲಿಸಲಾಗಿದೆ. ಈತನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದ್ದು ಶೀಘ್ರದಲ್ಲೇ ರಾಮವೀರ್ನನ್ನ ಬಂಧಿಸಲಿದ್ದೇವೆ. ಈ ಕೊಲೆಗೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.