alex Certify ʼನೋಟಾʼಗೆ ಅಧಿಕ ಮತ ಬಂದಲ್ಲಿ ಚುನಾವಣೆ ರದ್ದು ಮಾಡಬೇಕೇ..? : ಕೇಂದ್ರ ಹಾಗೂ ಚುನಾವಣಾ ಆಯೋಗದಿಂದ ವಿವರಣೆ ಕೇಳಿದ ʼಸುಪ್ರೀಂʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನೋಟಾʼಗೆ ಅಧಿಕ ಮತ ಬಂದಲ್ಲಿ ಚುನಾವಣೆ ರದ್ದು ಮಾಡಬೇಕೇ..? : ಕೇಂದ್ರ ಹಾಗೂ ಚುನಾವಣಾ ಆಯೋಗದಿಂದ ವಿವರಣೆ ಕೇಳಿದ ʼಸುಪ್ರೀಂʼ

ಮತಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಿಂತ ನೋಟಾಗೆ ಹಾಕಲಾದ ಮತವೇ ಹೆಚ್ಚಿದ್ದರೆ ಅಂತಹ ಮತಕ್ಷೇತ್ರಗಳಲ್ಲಿ ಫಲಿತಾಂಶವನ್ನ ರದ್ದು ಮಾಡಿ ಆ ಅಭ್ಯರ್ಥಿಗಳಿಗೆ ಚುನಾವಣೆಯನ್ನ ನಿರ್ಬಂಧಿಸಿ ಹೊಸ ಚುನಾವಣೆಯನ್ನ ನಡೆಸಬೇಕು ಎಂಬ ಪಿಐಎಲ್​ ಸಂಬಂಧ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್,​ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್​ ಜಾರಿ ಮಾಡಿದೆ.

ಮುಖ್ಯ ನಾಯಮೂರ್ತಿ ಎಸ್​.ಎ. ಬೋಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್.​ ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್​ ನೇತೃತ್ವದ ನ್ಯಾಯಪೀಠ ಕಾನೂನು ಸಚಿವಾಲಯ ಹಾಗೂ ಚುನಾವಣಾ ಆಯೋಗಕ್ಕೆ ಪಿಐಎಲ್​ ಸಂಬಂಧ ಉತ್ತರ ನೀಡುವಂತೆ ಸೂಚಿಸಿ ನೋಟಿಸ್​ ಜಾರಿ ಮಾಡಿದೆ.

ಆದರೆ ಈ ಪಿಐಎಲ್​ ಸಂಬಂಧ ಕಳವಳ ವ್ಯಕ್ತಪಡಿಸಿದ ಬೋಬ್ಡೆ ನೇತೃತ್ವದ ನ್ಯಾಯಪೀಠ, ಒಂದು ವೇಳೆ ಫಲಿತಾಂಶವನ್ನೇ ರದ್ದು ಮಾಡಿ ಅಭ್ಯರ್ಥಿಗೆ ಮರು ಸ್ಪರ್ಧೆಗೆ ಅವಕಾಶವನ್ನೇ ನೀಡದೇ ಇದ್ದಲ್ಲಿ ಸಂಸತ್​ನಲ್ಲಿ ಆ ಕ್ಷೇತ್ರದ ಅಸ್ತಿತ್ವವೇ ಇರೋದಿಲ್ಲ ಅಲ್ಲವೇ ಎಂದು ಕೇಳಿದೆ.

ಅರ್ಜಿದಾರರ ಪರ ಹಾಜರಾಗಿದ್ದ ವಕೀಲೆ ಮೇನಕಾ ಗುರುಸ್ವಾಮಿ, ನೋಟಾಗೆ ಅಧಿಕ ಮತ ನೀಡಿದ್ದಾರೆ ಎಂದರೆ ಅದರರ್ಥ ಜನತೆ ಅಭ್ಯರ್ಥಿಗಳನ್ನ ತಿರಸ್ಕರಿಸಿದ್ದಾರೆ ಎಂದರ್ಥ. ಈ ಮೂಲಕ ರಾಜಕೀಯ ಪಕ್ಷಗಳು ಉತ್ತಮ ಅಭ್ಯರ್ಥಿಗಳನ್ನ ಹುಡುಕಲು ಸಹಾಯವಾಗುತ್ತೆ ಎಂದು ಕೋರ್ಟ್​ಗೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...