alex Certify ಕದ್ದ ಹಣವನ್ನ ಎಣಿಸುತ್ತಾ ಖುಷಿಯಲ್ಲಿ ತೇಲುತ್ತಿದ್ದ ವೇಳೆಯೇ ಕಳ್ಳನಿಗೆ ಹೃದಯಾಘಾತ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕದ್ದ ಹಣವನ್ನ ಎಣಿಸುತ್ತಾ ಖುಷಿಯಲ್ಲಿ ತೇಲುತ್ತಿದ್ದ ವೇಳೆಯೇ ಕಳ್ಳನಿಗೆ ಹೃದಯಾಘಾತ..!

ಭಾರೀ ಮೊತ್ತದ ಹಣವನ್ನ ಕಳ್ಳತನ ಮಾಡಿದೆ ಎಂದು ಕಳ್ಳ ಸಿಕ್ಕಾಪಟ್ಟೆ ಖುಷಿ ಪಟ್ಟ ಪರಿಣಾಮ ಆತನಿಗೆ ಹೃದಯಾಘಾತವಾದ ವಿಚಿತ್ರ ಘಟನೆ ಉತ್ತರ ಪ್ರದೇಶ ಬಿಜ್ನೋರ್​ನಲ್ಲಿ ನಡೆದಿದೆ.

ತಾನು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದ ಹಣ ಕಳ್ಳತನ ಮಾಡಿದ್ದೇನೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಕಳ್ಳ ಫುಲ್​ ಖುಶಿಯಾಗಿದ್ದಾನೆ. ಆದರೆ ಇದರಿಂದ ಆತನಿಗೆ ಹೃದಯಾಘಾತವಾಗಿದ್ದು ಕಳ್ಳತನದ ಹಣವನ್ನ ಚಿಕಿತ್ಸೆಗೆ ಬಳಕೆ ಮಾಡಲಾಗ್ತಿದೆ.

ಕೋಟ್ವಲಿ ದೇಹತ್​ ಏರಿಯಾದಲ್ಲಿ ನಡೆದ ಕಳ್ಳತನ ಪ್ರಕರಣವೊಂದರ ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದ ವೇಳೆ ಕಳ್ಳರು ಈ ವಿಚಾರವನ್ನ ಬಾಯ್ಬಿಟ್ಟಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಪೊಲೀಸ್​ ಅಧಿಕಾರಿ ಧರ್ಮವೀರ್​ ಸಿಂಗ್​, ಫೆಬ್ರವರಿ 16 – 17ರ ಮಧ್ಯರಾತ್ರಿ ವೇಳೆ ನವಾಬ್​ ಹೈದರ್​ ಎಂಬ ವ್ಯಕ್ತಿಯ ಒಡೆತನದ ಸಾರ್ವಜನಿಕ ಸೇವಾ ಕೇಂದ್ರಕ್ಕೆ ಇಬ್ಬರು ಕಳ್ಳರು ನುಸುಳಿದ್ದರು ಎಂದು ಹೇಳಿದ್ರು.

ಇನ್ನು ಈ ವಿಚಾರವಾಗಿ ಹೈದರ್​, ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು 7 ಲಕ್ಷ ರೂಪಾಯಿ ಕಳುವಾಗಿದೆ ಎಂದು ಹೇಳಿದ್ದರು. ಇದೀಗ ನೌಶಾದ್​ ಹಾಗೂ ಅಜಾಜ್​​ರನ್ನ ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...