ಇದು ವಿದೇಶದಲ್ಲಿರುವ ಯಾವುದೋ ನಗರವಲ್ಲ. ಕೇರಳ ರಾಜ್ಯದ ಪಟ್ಟಣವೊಂದರಲ್ಲಿ ನಿರ್ಮಾಣಗೊಂಡಿರುವ ಸುಂದರ ಉದ್ಯಾನವನ.
ಕೋಯಿಕ್ಕೋಡ್ ಜಿಲ್ಲೆ ಕರಕ್ಕಾಡ್ ಗ್ರಾಮದಲ್ಲಿ ನಿರ್ಮಿಸಿರುವ ವಾಗ್ಭಟಾನಂದ ಉದ್ಯಾನವನವನ್ನು ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ಇತ್ತೀಚೆಗೆ ಸಾರ್ವಜನಿಕ ಬಳಕೆಗೆಂದು ಸಮರ್ಪಣೆ ಮಾಡಿದರು.
ಅದರ ಪೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಂದಕ್ಕಿಂತ ಒಂದು ಅದ್ಭುತ ಎನಿಸುವಷ್ಟು ನಯನ ಮನೋಹರವಾಗಿವೆ.
ಬ್ಯಾಡ್ಮಿಂಟನ್ ಕೋರ್ಟ್, ಜಿಮ್, ಸಾರ್ವಜನಿಕ ಶೌಚಾಲಯ ಸೇರಿದಂತೆ ಇನ್ನಿತರ ಸೌಲಭ್ಯಗಳಿದ್ದು, ಅಂಗವಿಕರು ವೀಲ್ ಚೇರ್ ಮೂಲಕ ಸಾಗಲು ಪ್ರತ್ಯೇಕ ಪಥ, ಅಂಧರಿಗೆ ದಾರಿ ಎಲ್ಲವೂ ಉಂಟು.