alex Certify BIG NEWS: ಕೋವಿಡ್​ ರೋಗಿಗಳ ಚಿಕಿತ್ಸೆ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್​ ರೋಗಿಗಳ ಚಿಕಿತ್ಸೆ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

ದೇಶದಲ್ಲಿ ಕೋವಿಡ್​​ನಿಂದ ಬಳಲುತ್ತಿರುವ ಸೋಂಕಿತರ ಚಿಕಿತ್ಸೆಗಾಗಿ ವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳನ್ನೂ ಬಳಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಉನ್ನತ ಮಟ್ಟದ ಸಭೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂಟರ್ನ್​ಶಿಪ್​ ಹಂತದಲ್ಲಿರುವ ವೈದ್ಯಕೀಯ ವಿದ್ಯಾರ್ಥಿಗಳನ್ನ ಕೋವಿಡ್​​ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

ಎಂಬಿಬಿಎಸ್​ ಅಂತಿಮ ಹಂತದಲ್ಲಿರುವ ವಿದ್ಯಾರ್ಥಿಗಳು ಇನ್ಮೇಲೆ ಸೌಮ್ಯ ಲಕ್ಷಣಗಳನ್ನ ಹೊಂದಿರುಸ ಸೋಂಕಿತರನ್ನ ಟೆಲಿ ಸಂದರ್ಶನದ ಮೂಲಕ ತಪಾಸಣೆ ನಡೆಸಲಿದ್ದಾರೆ. ಸದ್ಯ ಕೋವಿಡ್​ ಡ್ಯೂಟಿಯಲ್ಲಿ ಹಗಲಿರುಳು ಶ್ರಮಿಸ್ತಾ ಇರುವ ವೈದ್ಯರಿಗೆ ಕೊಂಚ ರಿಲೀಫ್​ ನೀಡುವ ಸಲುವಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಇದು ಮಾತ್ರವಲ್ಲದೇ ಸರ್ಕಾರ ಕನಿಷ್ಟ ನಾಲ್ಕು ತಿಂಗಳವರೆಗೆ ನೀಟ್​ – ಪಿಜಿ ಪರೀಕ್ಷೆಯನ್ನ ಮುಂದೂಡಲು ನಿರ್ಧರಿಸಿದೆ. ಅಂದರೆ ಆಗಸ್ಟ್ 31ರ ಒಳಗಾಗಿ ಈ ಪರೀಕ್ಷೆಗಳು ನಡೆಯೋದಿಲ್ಲ. ಪರೀಕ್ಷೆ ನಡೆಯುವ ಒಂದು ತಿಂಗಳ ಮೊದಲೇ ವಿದ್ಯಾರ್ಥಿಗಳಿಗೆ ದಿನಾಂಕವನ್ನ ಪ್ರಕಟಿಸಲಾಗುವುದು ಎಂದೂ ಹೇಳಿದೆ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಇನ್ಮೇಲೆ ಕೋವಿಡ್ ರೋಗಿಗಳ ಚಿಕಿತ್ಸೆಗೆ ಸಿಗಲಿದ್ದಾರೆ ಎಂದು ಸರ್ಕಾರ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...