alex Certify ಡಕಾಯಿತರ ಕತೆ ಹೇಳಲು ತಲೆ ಎತ್ತಲಿದೆ ವಸ್ತು ಸಂಗ್ರಹಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಕಾಯಿತರ ಕತೆ ಹೇಳಲು ತಲೆ ಎತ್ತಲಿದೆ ವಸ್ತು ಸಂಗ್ರಹಾಲಯ

ಮಧ್ಯ ಪ್ರದೇಶದ ಚಂಬಲ್​ ಪ್ರಾಂತ್ಯದಲ್ಲಿ ಒಂದು ಕಾಲದಲ್ಲಿ ನಡುಕ ಹುಟ್ಟಿಸಿದ್ದ ಡಕಾಯಿತರು ಹಾಗೂ ಅವರನ್ನ ಭೇದಿಸಲು ಪೊಲೀಸರು ಪಟ್ಟ ಸಾಹಸವನ್ನ ಭಿಂದ್​ ಜಿಲ್ಲೆಯ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡಕಾಯಿತೆ ಹಾಗೂ ಮಾಜಿ ಸಂಸದೆ ಫೂಲನ್ ದೇವಿ, ಡಕಾಯಿತ ಮಲ್ಖಾನ್​ ಸಿಂಗ್​, ಡಕಾಯಿತನಾಗಿ ಪರಿವರ್ತಿತನಾದ ಕ್ರೀಡಾಪಟು ಪಾನ್​ ಸಿಂಗ್​ ತೋಮರ್​​ ಅವರ ಕತೆಗಳನ್ನ ಈ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ.

ಈ ವಸ್ತು ಸಂಗ್ರಹಾಲಯ ಸ್ಥಾಪನೆ ಮಾಡಲು ಮಧ್ಯ ಪ್ರದೇಶದ ಪೊಲೀಸರು ಆರ್ಥಿಕ ನೆರವನ್ನ ನೀಡುತ್ತಿದ್ದಾರೆ. ಮುಂದಿನ ತಿಂಗಳು ಈ ವಸ್ತು ಸಂಗ್ರಹಾಲಯ ಲೋಕಾರ್ಪಣೆಯಾಗಲಿದೆ ಎಂದು ಭಿಂದ್​ ಸೂಪರಿಟೆಂಡೆಂಟ್​​ ಮನೋಜ್​ ಕುಮಾರ್​ ಸಿಂಗ್​ ಹೇಳಿದ್ದಾರೆ.

ಡಕಾಯಿತರ ವಿರುದ್ಧ ಹೋರಾಡಿ ಸಾಧನೆ ಮಾಡಿದ ಪೊಲೀಸರ ಕತೆಗಳು ಇನ್ನೂ ಎಲೆಮರೆಯ ಕಾಯಿಯಂತೆಯೇ ಇದೆ. ಹೀಗಾಗಿ ಇಂತವರ ಕತೆಗಳನ್ನ ಮುನ್ನೆಲೆಗೆ ತರಲು ಈ ಪ್ರಯತ್ನ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...