alex Certify ಕುಟುಂಬಸ್ಥರ ಎದುರೇ ಪೇದೆಯನ್ನು ಕೊಂದು ಬೆಂಕಿ ಹಚ್ಚಿದ ನಕ್ಸಲರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬಸ್ಥರ ಎದುರೇ ಪೇದೆಯನ್ನು ಕೊಂದು ಬೆಂಕಿ ಹಚ್ಚಿದ ನಕ್ಸಲರು..!

ಶರಣಾಗತ ನಕ್ಸಲನೊಬ್ಬ ಶಸ್ತ್ರಾಸ್ತ್ರಗಳನ್ನ ಬದಿಗಿಟ್ಟು ಜಿಲ್ಲಾ ರಿಸರ್ವ್​ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ ಬಳಿಕ ಮಾವೋವಾದಿಗಳಿಂದ ಹತನಾದ ದಾರುಣ ಘಟನೆ ಛತ್ತೀಸ್ಗಡದ ವಿಜಯಪುರದಲ್ಲಿ ನಡೆದಿದೆ. ತನ್ನ ಮಕ್ಕಳು ಹಾಗೂ ಕುಟುಂಬಸ್ಥರನ್ನ ಭೇಟಿಯಾಗೋಕೆಂದು ವಿಜಯಪುರದಲ್ಲಿರುವ ಮನೆಗೆ ಆಗಮಿಸಿದ್ದ ವೇಳೆ ಈ ದುರಂತ ಸಂಭವಿಸಿದೆ.

ಅಂದಹಾಗೆ ಸೋಮ್ದು ರಾಮ್​ ಪಯಮ್ ಅಲಿಯಾಸ್​ ಮಲ್ಲೇಶ್​ರನ್ನ ಆತನ ಸ್ವಂತ ಸಹೋದರನೇ ಕೊಲೆ ಮಾಡಿದ್ದಾನೆ. ಆತನ ಸಹೋದರ ಇನ್ನೂ ಮಾವೋವಾದಿಯಾಗಿದ್ದಾನೆ. ಮಲ್ಲೇಶ್​ನನ್ನ ಮಕ್ಕಳ ಹಾಗೂ ಕುಟುಂಬಸ್ಥರ ಎದುರೇ ಥಳಿಸಿ ಬಳಿಕ ಶಸ್ತ್ರಾಸ್ತ್ರಗಳಿಂದ ಇರಿದು ಕೊಲೆ ಮಾಡಿ ಬಳಿಕ ಮೃತದೇಹಕ್ಕೆ ಬೆಂಕಿ ಹಚ್ಚಲಾಗಿದೆ.

ಕೈಮೇಲೆ ಜೇನ್ನೊಣಗಳ ಹಿಂಡನ್ನೇ ಸಾಗಿಸಿದ ಭೂಪ…!

ಮಲ್ಲೇಶ್​ ಕುಟುಂಬಸ್ಥರನ್ನ ಭೇಟಿಯಾಗಲು ಕೊಟ್ರಾಪಲ್​​ಗೆ ತೆರಳಿದ್ದರು. ಈ ವೇಳೆ ಆತನ ಸಹೋದರ ಬುರ್ಕಾ ಪೋಯಮಿ ಅಲಿಯಾಸ್ ಕೋಸಾ ಈ ದಾಳಿ ನಡೆಸಿದ್ದಾನೆ. ಕೋಸಾ ಶರಣಾಗತಿಗೆ ಮಲ್ಲೇಶ್​ ಮನವೊಲಿಸಲು ಪ್ರಯತ್ನಿಸಿದ್ದೇ ಈ ಕೊಲೆಗೆ ಕಾರಣವಿರಬಹುದೆಂದು ಪೊಲೀಸ್​ ಅಧಿಕಾರಿಗಳು ಶಂಕಿಸಿದ್ದಾರೆ. 2014ರಲ್ಲಿ ಶರಣಾಗಿದ್ದ ಮಲ್ಲೇಶ್​ ಡಿಆರ್​ಜಿಗೆ ಸೇರಿಕೊಂಡಿದ್ದರು.

ರೈತರ ಪ್ರತಿಭಟನೆಯಿಂದಾಗಿ ಟೋಲ್​ ಸಂಗ್ರಹದಲ್ಲಾಗಿರುವ ನಷ್ಟವೆಷ್ಟು ಗೊತ್ತಾ…?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...