alex Certify ಶ್ವಾನಗಳ ಕಾರಣಕ್ಕೆ ಟ್ರಕ್ ಚಾಲಕ ಚಿರತೆಯಿಂದ ಬಚಾವ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನಗಳ ಕಾರಣಕ್ಕೆ ಟ್ರಕ್ ಚಾಲಕ ಚಿರತೆಯಿಂದ ಬಚಾವ್…!

ಇತ್ತೀಚೆಗೆ ಚಿರತೆಗಳು ಜನವಸತಿ ಪ್ರದೇಶದ ದಾಳಿ ಮಾಡುವ ಪ್ರಮಾಣ ಹೆಚ್ಚಾಗುತ್ತಿದೆ, ಹೈದರಾಬಾದ್‌ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ.‌ ಆದರೆ, ನಾಯಿಗಳ ಹಿಂಡೊಂದು ಟ್ರಕ್ ಚಾಲಕನ ಪ್ರಾಣ ರಕ್ಷಿಸಿವೆ.

ಚಿರತೆಯು ಟ್ರಕ್ ಚಾಲಕರನ್ನು ಅಟ್ಟಿಸಿಕೊಂಡು ಬಂದು ಆತನ ಮೇಲೆ ಮುಗಿಬೀಳುವ ಮತ್ತು ಇದೇ ವೇಳೆ ನಾಯಿಗಳ ಹಿಂಡು ಚಿರತೆಯನ್ನು ಬೊಗಳಿ ಗಾಬರಿಗೊಳಿಸುವ ವಿಡಿಯೋ ವೈರಲ್ ಆಗಿದೆ.

ಇಬ್ಬರು ಟ್ರಕ್ ಸಿಬ್ಬಂದಿ ಚಿರತೆಯಿಂದ ತಪ್ಪಿಸಿಕೊಳ್ಳಲು ಓಡೋಡಿ ಬಂದು ಟ್ರಕ್ ಒಳಗೆ ನುಗ್ಗಲು ಪ್ರಯತ್ನಿಸುತ್ತಾರೆ, ಒಬ್ಬ ಒಳಪ್ರವೇಶಿಸಿದ ಬಳಿಕ ಮತ್ತೊಬ್ಬ ಅಕ್ಕ ಪಕ್ಕದ ಕಟ್ಟಡದ ಬಾಗಿಲು ಬಡಿದು ಎಲ್ಲೂ ಬಾಗಿಲು ತೆರೆಯದಾದಾಗ ಪುನಃ ಟ್ರಕ್ ಒಳಗೆ ಹೋಗಲು ಪ್ರಯತ್ನಿಸುತ್ತಾರೆ. ಅಷ್ಟರಲ್ಲಿ ಚಿರತೆ ಆತನ ಕಾಲು ಹಿಡಿದೆಳೆಯಲು ಪ್ರಾರಂಭಿಸುತ್ತದೆ.

ಈ ಸಂದರ್ಭದಲ್ಲಿ ಎಂಟ್ರಿ ಕೊಡುವ ಆರು ನಾಯಿಗಳು ಚಿರತೆಯನ್ನು ಸುತ್ತುವರಿಯುತ್ತವೆ. ಈಗ ಬೆಚ್ಚುವ ಸರದಿ ಚಿರತೆಯದ್ದು. ಚಿರತೆ ಕೂಡ ಕಂಡ ಕಂಡ ಕಟ್ಟಡದೊಳಗೆ ನುಗ್ಗಲು ಪ್ರಯತ್ನಿಸಿ ವಿಫಲವಾಗುತ್ತದೆ. ನಾಯಿಗಳ ಅಬ್ಬರ ಕಂಡು ಚಿರತೆ ಅದುರಿ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...